ನ.30:ಪಲ್ಲೋಡಿಯಲ್ಲಿ ಯಕ್ಷಗಾನ ತಾಳೆ ಮದ್ದಳೆ -ಶ್ರೀರಾಮ ದರ್ಶನ

0

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ ಸಹಭಾಗಿತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ-2022 ಪಲ್ಲೋಡಿಯಲ್ಲಿ ನ.30 ರಂದು ಸಂಜೆ ಗಂ.6. ರಿಂದ ಜರುಗಲಿದೆ.


ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೃಷ್ಣ ವೈಲಾಯ ಉದ್ಘಾಟಿಸಲಿದ್ದಾರೆ. ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಸಭಾಧ್ಯಕ್ಷತೆ ವಹಿಸಲ್ಲಿದ್ದಾರೆ. ಅತಿಥಿಯಾಗಿ ಶ್ರೀ ಉಳ್ಳಾಕುಲು -ಚಾಮುಂಡಿ ದೈವಸ್ಥಾನದ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ, ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಉಪಸ್ಥಿತರಿರುವರು.

ಪ್ರಸಂಗ ‘ಶ್ರೀರಾಮ ದರ್ಶನ’. ಭಾಗವತರಾಗಿ ಪ್ರಶಾಂತ್ ಪಂಜ, ಕು.ರಚನಾ ಚಿದ್ಗಲ್ಲು, ಮದ್ದಳೆ- ಚಂದ್ರಶೇಖರ ಗುರುವಾಯನಕೆರೆ , ಚೆಂಡೆ -ಕುಮಾರ ಸುಬ್ರಹ್ಮಣ್ಯ ವಳ್ಳಕುಂಜ, ಅರ್ಥದಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಗಣರಾಜ್ ಕುಂಬ್ಳೆ, ವೆಂಕಟೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ .ಎಂದು ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.