ಮೇ. 10 ,11 : ಸಂಪಾಜೆ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಕೊಡಗು ಸಂಪಾಜೆ ಅರಮನೆ ತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವದ ಕಾಲಾವಧಿ ಒತ್ತೆಕೋಲವು ಮೇ 10 ಮತ್ತು 11 ರಂದು ವಿಜೃಂಭಣೆಯಿಂದ ಅರಮನೆ ತೋಟ ಚಾವಡಿ ಗದ್ದೆಯಲ್ಲಿ ನಡೆಯಲಿದೆ.

ಮೇ .10 ರಂದು ಸಂಜೆ 7 ಗಂಟೆಗೆ ದೀಪಾರಾಧನೆ ಹಾಗೂ ಶ್ರೀ ಮಹಾವಿಷ್ಣು ಮೂರ್ತಿ ದೈವದ ಭಂಡಾರ ತೆಗೆಯುವುದು, ರಾತ್ರಿ 9 ಗಂಟೆಗೆ ಮೇಲೇರಿ ಅಗ್ನಿ ಸ್ಪರ್ಶ, ರಾತ್ರಿ 10 ಗಂಟೆಗೆ ಅನ್ನ ಸಂತರ್ಪಣೆ, 12:30 ಕೆ ಕುಲ್ಚಾಟ ಹೊರಡುವುದು. , ಮೇ. 11 ರಂದು ಬೆಳಿಗ್ಗೆ 6 ಗಂಟೆಗೆ ದೈವದ ಆಗ್ನಿ ಪ್ರವೇಶ, ಬಳಿಕ ಹರಕೆ ಹಾಗೂ ಪ್ರಸಾದ ವಿತರಣೆ, 9 ಗಂಟೆಗೆ ಮಾರಿಕಳ ಪ್ರವೇಶ , ಪ್ರಸಾದ ವಿತರಣೆ ನಡೆಯಲಿದೆ.