ಪಾಂಡಿಗದ್ದೆ ಶಾಲೆಯಲ್ಲಿ ಕೋಟೆ ಫೌಂಡೇಶನ್ ವತಿಯಿಂದ ಬ್ಯಾಗ್ ವಿತರಣಾ ಕಾರ್ಯಕ್ರಮ

0

ದ.ಕ.ಜಿ.ಪಂ.ಕಿ. ಪ್ರಾ ಶಾಲೆ ಪಾಂಡಿಗದ್ದೆಯಲ್ಲಿ ರೈಟ್ ಟು ಲಿವ್ ಕೋಟೆ ಫೌಂಡೇಶನ್ ಕೋಟೆ ಫೌಂಡೇಶನ್ ವತಿಯಿಂದ ಬ್ಯಾಗ್ ವಿತರಣಾ ಕಾರ್ಯಕ್ರಮ ದ.2 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟೆ ಫೌಂಡೇಶನ್ ವತಿಯಿಂದ ಗಣಪಯ್ಯ ವನಶ್ರೀ ಪೆರುವಾಜೆ ಯವರು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.

ವೇದಿಕೆಯಲ್ಲಿ ಮಹೇಶ್ ಕೋಟೆ , ಶ್ರೀಮತಿ ಸುವರ್ಣ ಎಂ ಕೋಟೆ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಯ ಯಶೋಧರ ಕೆ ಸ್ವಾಗತಿಸಿದರು. ಶಿಕ್ಷಕ ಅಶೋಕ್ ಕುಮಾರ್ ನಿರೂಪಿಸಿದರು.
ಅತಿಥಿ ಶಿಕ್ಷಕಿ ಶ್ರೀಮತಿ ವಿಂದ್ಯಾ ವಂದಿಸಿದರು.