ಸುಳ್ಯದ ಜಟ್ಟಿಪಳ್ಳ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಆರೋಹಣ್ ಅಸೋಸಿಯೇಟ್ಸ್ ಶುಭಾರಂಭ

0

ಸುಳ್ಯದ ಜಟ್ಟಿಪಳ್ಳ ರಸ್ತೆಯ ಕುರುಂಜಿಕಾರ್ಸ್ ಕಾಂಪ್ಲೆಕ್ಸ್ ನಲ್ಲಿ ಸಿವಿಲ್ ಇಂಜಿನಿಯರ್ ಗಳಾದ ಶರತ್ ದೇವ ಮತ್ತು ಸೃಜನ್ ಬಿ.ಎಸ್ ರವರ ಆರೋಹಣ್ ಅಸೋಸಿಯೇಟ್ಸ್ ಕನ್ಸ್ಟ್ರಕ್ಷನ್ ಮತ್ತು ಕನ್ಸಲ್ಟೆನ್ಸಿಕಚೇರಿಯು
ಡಿ.8 ರಂದು ಶುಭಾರಂಭಗೊಂಡಿತು.


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ದೀಪ ಬೆಳಗಿಸಿ ಶುಭ ಸಂಸ್ಥೆಗೆ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕೆ.ಜೆ, ಸುಳ್ಯ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ ಎಂ.ಎಸ್, ಧನ್ಯ ಫ್ಯಾನ್ಸಿ ಸ್ಟೋರ್ ಮಾಲಕ ಹರಿಶ್ಚಂದ್ರ ಬಾಬ್ಲುಬೆಟ್ಟು, ಶ್ರೀಮತಿ ವಾಣಿ, ಗೋಪಾಲಕೃಷ್ಣ ದೇವ, ಗುಣವತಿ, ದೀಕ್ಷಾ ಟ್ರೇಡರ್ಸ್ ಮಾಲಕ ಮಾಧವ,ಬಾಲಚಂದ್ರ ಕೊಳಂಗಾಯ,ಗೋಪಾಲ ಕರೋಡಿ,ಭವಿನ್,ಬಾಲಕೃಷ್ಣ ದೇವ,ಅಶ್ವಥ್ ಕೊಳಂಗಾಯ, ಹಮೀದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಿವಿಲ್
ಇಂಜಿನಿಯರ್ ಶರತ್ ಸ್ವಾಗತಿಸಿ, ಸೃಜನ್ ಬಿ.ಎಸ್ ವಂದಿಸಿದರು.