ಪಯಸ್ವಿನಿ ಕೃಷಿ ಮೇಳದ ವಿವಿಧ ಸಮಿತಿಯ ಸಂಚಾಲಕರುಗಳ
ಸಭೆ

0

ಡಿಸೆಂಬರ್ 16 ರಿಂದ 18 ರವರೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಬೃಹತ್ ಕೃಷಿ ಮೇಳ ” ಪಯಸ್ವಿನಿ” ಇದರ
ಪೂರ್ವಭಾವಿ ಸಭೆ ಇಂದು (ಡಿ.9 ರಂದು ) ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕೃಷಿ ಮೇಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿ. ಆರ್. ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮಿತಿಯ ಸಂಚಾಲಕರು ತಮ್ಮ ಸಮಿತಿಯಿಂದ ಆದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಪ್ರದಾನ ಕಾರ್ಯದರ್ಶಿ ವೀರಪ್ಪ ಗೌಡ, ತಾಲೂಕು ವೈದ್ಯಧಿಕಾರಿ ಡಾ. ನಂದಕುಮಾರ್, ಐವರ್ನಾಡು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.