ಗೂನಡ್ಕದಲ್ಲಿ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನ, ವೇದಿಕೆಯಲ್ಲಿ 6 ಸಾಹಿತ್ಯ ಕೃತಿಗಳ ಬಿಡುಗಡೆ

0


ಗೂನಡ್ಕದ ಸಜ್ಜನ ಸಭಾಂಗಣದಲ್ಲಿ ನಡೆಯುತ್ತಿರುವ 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 6 ಸಾಹಿತ್ಯ ಕೃತಿಗಳನ್ನು ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಬಿಡುಗಡೆಗೊಳಿಸಿದರು.


ಸಾಹಿತಿಗಳಾದ ಲೀಲಾ ದಾಮೋದರ್ ರವರ ಕುರು ಸಾಮ್ರಾಜ್ಞಿ, ಚಂದ್ರಾವತಿ ಬಡ್ಡಡ್ಕರವರ ಲಘುಬಿಗು ಕನ್ನಡ ಪ್ರಬಂಧ ಮತ್ತು ಚಂದ್ರಕ್ಕನ ಪೊಳ್ಮೆ ಪ್ರಬಂಧ, ಪಿ.ಜಿ.ಅಂಬೆಕಲ್ಲುರವರ ಅವರವರ ಕಣ್ಣ್ ಲಿ ಕಥಾ ಸಂಕಲನ, ಡಾ.ಪ್ರಭಾಕರ ಶಿಶಿಲರವರ ನಲಿಕೆದ ನವಿಲ್ ಅನುವಾದ ಕೃತಿ,ಹಾಗೂ ಸರ್ವಾಧ್ಯಕ್ಷರಾದ ಕೆ.ಆರ್.ಗಂಗಾಧರ್ ರವರ ಕೃತಿ ಕೂಡ ಬಿಡುಗಡೆಗೊಂಡವು.