ಸುಳ್ಯ ವೆಂಕಟರಮಣ ಸೊಸೈಟಿಯಲ್ಲಿ ನಿತ್ಯಾನಂದ ಮುಂಡೋಡಿ ಮತ್ತು ಕೆ.ಟಿ.ವಿಶ್ವನಾಥರಿಗೆ ಗೌರವಾರ್ಪಣೆ, ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ

0

ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯ ಸೊಸೈಟಿಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಡಿ.17ರಂದು ನಡೆಯಿತು.
ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸೊಸೈಟಿಯ ಪೂರ್ವಾಧ್ಯಕ್ಷ, ಹಾಲಿ ನಿರ್ದೇಶಕರಾಗಿರುವ ನಿತ್ಯಾನಂದ ಮುಂಡೋಡಿಯವರನ್ನು ಹಾಗೂ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಸ್ತೂರಿ ಸನ್ಮಾನ ಸ್ವೀಕರಿಸಿದ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥರನ್ನು ಸೊಸೈಟಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.


ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ಉಪಾಧ್ಯಕ್ಷ ಮೋಹನರಾಮ್ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ಕೆ.ಸಿ. ಸದಾನಂದ, ಪಿ. ಎಸ್. ಗಂಗಾಧರ್, ಕೆ. ಸಿ. ನಾರಾಯಣ ಗೌಡ, ದಾಮೋದರ ನಾರ್ಕೋಡು, ದಿನೇಶ್ ಮಡಪ್ಪಾಡಿ, ಐ.ಕೆ.ಹೇಮಚಂದ್ರ, ಶ್ರೀಮತಿ ಜಯಲಲಿತ ,ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ, ಎಜಿಎಂ ಮನೋಜ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.