ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ವಿಜಯ ದಿವಸ್

0

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ವಿಜಯ ದಿವಸ್ ಕಾರ್ಯಕ್ರಮವನ್ನು
ಡಿ.16 ರಂದು ಹಮ್ಮಿಕೊಳ್ಳಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಮಂದಿ ಮಾಜಿ ಸೈನಿಕರು ಮತ್ತು ಗ್ರಹರಕ್ಷಕದಳ ದವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸಿ.ಡಿ ದಿನೇಶ್‍ರವರು ವಿಜಯ್ ದಿವಸದ ಮಹತ್ವವನ್ನು ತಿಳಿಹೇಳಿದರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರೊಫೆಸರ್ ರಂಗಯ್ಯ ಶೆಟ್ಟಿಗಾರ್ ವಹಿಸಿದರು. ಅವರು ತನ್ನ ಮಾತಿನಲ್ಲಿ 1971 ರ ಭಾರತ ಪಾಕ್ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯದ ಬಗ್ಗೆ ಬೆಳಕು ಚೆಲ್ಲಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ಪಿ.ಜಿ ಶುಭ ಹಾರೈಸಿದರು . ಗೃಹರಕ್ಷಕ ದಳದವರಾದ ವಿನಯ ಪಿಎಂ, ಜಯಪ್ರಕಾಶ ಮತ್ತು ಪ್ರಶಾಂತ ಕೆ.ಪಿ ಹಾಗೂ ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ವಿಶ್ವನಾಥ ಕೆ, ವೇದಿಕೆಯಲ್ಲಿದ್ದರು ಕಾರ್ಯದರ್ಶಿ ಸತೀಶ್ ಕುಜುಗೋಡು ಸ್ವಾಗತಿಸಿ, ಖಜಾಂಜಿ ರಾಮಚಂದ್ರ ಪಳoಗಾಯ ವಂದಿಸಿದರು. ಕ್ಲಬ್ ನ ಸದಸ್ಯರಾದ ದಿನೇಶ್ ಎಂಪಿ, ಮೋಹನ್ ದಾಸ್ ರೈ, ಭಾರತಿ ದಿನೇಶ್, ಹಾಜರಿದ್ದರು . ಶ್ರೀಮತಿ ವಿಮಲ ರಂಗಯ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.