ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅಮೂಲ್ಯ ಗೋಕುಲ್ ದಾಸ್ 25 ಸಾವಿರ ದೇಣಿಗೆ

0

ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿ ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಗೋಕುಲದಾಸ್ ರವರ ಪುತ್ತಿಯರಾದ ಅಪೂರ್ವ ಮತ್ತು ಅಮೂಲ್ಯ ಗೋಕುಲ್ ದಾಸ್ ರವರು ರೂ.25,000/- ದೇಣಿಗೆಯನ್ನು ಉತ್ಸವ ಸಮಿತಿಯ ಖಜಾಂಜಿ ಹರೀಶ್ ರೈ ಉಬರಡ್ಕ ರವರಿಗೆ ಹಸ್ತಾಂತರಿಸಿದರು. ಸಿರಿಕುರಲ್ ನಗರದ ವನದುರ್ಗಾ ಮತ್ತು ರಕ್ತೇಶ್ವರಿ ಪರಿವಾರ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಜತೆಯಲ್ಲಿದ್ದರು. ದೈವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎನ್. ಎ ರಾಮಚಂದ್ರ, ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಪೆರಾಜೆ ಶ್ರೀ ಶಾಸ್ತವು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿತೇಂದ್ರ ಎನ್ ಎ ನಿಡ್ಯಮಲೆ, ಮಂಜುನಾಥ ಮೇಸ್ತ್ರಿ ಬಳ್ಳಾರಿ ಹಾಗೂ ನವೀನ್ ಚಂದ್ರ ಬೆಂಗಳೂರು, ಬೂಡು ರಾಧಾಕೃಷ್ಣ ರೈ, ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ಉಪಸ್ಥಿತರಿದ್ದರು.