ಭಜನೆಯ ಮತ್ತು ಭಜಕರಿಗೆ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ – ಬಜರಂಗದಳ ಸಂಘಟನೆಯವರಿಂದ ಪೋಲಿಸ್ ದೂರು

0

ಭಜನೆಯ ಮತ್ತು ಭಜಕರ ಮನಸ್ಸಿಗೆ ಘಾಸಿ ಮಾಡುವಂತಹ ಅಶ್ಲೀಲ ಬರಹವನ್ನು ಬೇಕಾಬಿಟ್ಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ವೈರಲ್ ಮಾಡಿರುವ ಅರಣ್ಯಾಧಿಕಾರಿ ಕಾಣಿಯೂರು ಸಂಜೀವ ಪೂಜಾರಿ ಎಂಬವರ ವಿರುದ್ಧ ಸುಳ್ಯ ತಾಲೂಕು ಬಜರಂಗದಳ ಸಂಘಟನೆಯ ವತಿಯಿಂದ ಬೆಳ್ಳಾರೆ ಪೊಲೀಸ್ ಠಾಣೆ ಯಲ್ಲಿ ಕೇಸು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ
ಲತೀಶ್ ಗುಂಡ್ಯ, ಸಚಿನ್ ಪೊವಜೆ. ಬೆಳ್ಳಾರೆ ಬಜರಂಗದಳ ಸಂಯೋಜಕ ಅನಿಲ್ ಪೂಜಾರಿ ಐವರ್ನಾಡು , ರೋಹಿತ್,‌ಸತೀಶ್ ಪದವು. ಚೇತನ್ ಪ್ರವೀಣ್ ರೈ ಮತ್ತಿತರರು ಉಪಸ್ಥಿತರಿದ್ದರು.