ಬೆಳ್ಳಾರೆ : ವಿಶೇಷ ಚೇತನರ ಗ್ರಾಮ ಸಭೆ

0

ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಪ್ರಯುಕ್ತ ವಿಶೇಷ ಗ್ರಾಮ ಸಭೆಯು ಡಿ.27 ರಂದು ಸಂಜೀವಿನಿ ಕಟ್ಟಡದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಚಂದ್ರಶೇಖರ ಪನ್ನೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರಾದ ಶ್ಯಾಮ್ ಪ್ರಸಾದ್ ರವರು 5 / ಅನುದಾನದಲ್ಲಿ ಸಿಗುವ ಸವಲತ್ತು ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ಪುಷ್ಪಶ್ರೀ ಯವರು ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ವಿಶೇಷ ಚೇತನರಿಗೆ ತಮ್ಮ ಪಂಚಾಯತ್ ಮಟ್ಟದಲ್ಲಿ ಆಗುವ ಸಹಾಯವನ್ನು ಮಾಡುವ ಭರವಸೆ ನೀಡಿದರು. ಸಭೆಯಲ್ಲಿ ಸದಸ್ಯರಾದ ಅನಿಲ್ ರೈ. ವಿಠಲ್ ದಾಸ್. ಮಣಿಕಂಠ. ಶ್ರೀಮತಿ ಭವ್ಯ ಉಪಸ್ಥಿತಿ ಇದ್ದರು ಹಾಗೂ ಆಶಾಕಾರ್ಯ ಕರ್ತೆ ಯರು ಮತ್ತು ಸಂಜೀವಿನಿ ಸಂಘ ದ ಯಮ್. ಬಿ. ಕೆ ಶ್ರೀಮತಿ. ಗೀತ ಹಾಗೂ ಯಲ್. ಸಿ. ಆರ್. ಹಾಜರಿದ್ದರು. ಈ ಸಂದರ್ಭದಲ್ಲಿ ವಿಶೇಷಚೇತನರ ಚೈತನ್ಯ ಸಂಜೀವಿನಿ ಸಂಘ ಉದ್ಘಾಟಿಸಲಾಯಿತು. ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ . ಪುಷ್ಪಶ್ರೀ ಸ್ವಾಗತಿಸಿದರು. ಶ್ರೀಮತಿ ಗೀತಾ ರವರು ವಂದಿಸಿದರು.