ಮಾ.ಗೌರವ್ ರೈ ಬೇಂಗನಡ್ಕ ಹಾಡಿರುವ ಕೊಡೆಂಚಿಕಾರ್ ದ ಸ್ವಾಮಿ ಕೊರಗಜ್ಜ ತುಳು ಭಕ್ತಿ ಸುಗಿಪು ಬಿಡುಗಡೆ

0


ಬಾಲಕ ಮಾ.ಗೌರವ್ ರೈ ಬೇಂಗನಡ್ಕ ಹಾಡಿರುವ ಕೊಡೆಂಚಿಕಾರ್ ದ ಸ್ವಾಮಿ ಕೊರಗಜ್ಜ ತುಳು ಭಕ್ತಿಗೀತೆ ಸುದಿಪು ಇಂದು ಪೆರಾಲ್ ಕೊಡಂಜಿಕಾರ್ ಕೊರಗಜ್ಜ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು.
ಕೊಡಂಚಿಕಾರ್ ನ ಸ್ವಾಮಿ ಕೊರಗಜ್ಜನ ಆರಾಧನೆ ಮತ್ತು ಕಾರ್ನಿಕವನ್ನು ಬಿಂಬಿಸುವ ಭಕ್ತಿಗೀತೆಯನ್ನು ಮಾ. ಗೌರವ್ ರೈ ಮನೋಜ್ಞ ಅಭಿನಯದೊಂದಿಗೆ ಇಂಪಾಗಿ ಹಾಡಿದ್ದು, ಕೊಡೆಂಚಿಕಾರ್ ದೈವಸ್ಥಾನದಲ್ಲಿಯೇ ಭಕ್ತಿಗೀತೆಯ ಛಾಯಾಗ್ರಹಣ ನಡೆಸಲಾಗಿದೆ. ಭಕ್ತಿ ಗೀತೆಗೆ ಜಿತೇಂದ್ರ ಶೆಟ್ಟಿ ಕಾರ್ಯಣ ರಾಗ ಸಂಯೋಜನೆ ಮಾಡಿದ್ದು, ವರ್ತೇಶ್ ರೈ ಕೊಂದಲಡ್ಕ ಸಾಹಿತ್ಯ ರಚಿಸಿದ್ದಾರೆ. ಭಾಸ್ಕರ ರಾವ್ ಬಿ.ಸಿ.ರೋಡ್ ರವರ ಸಂಗೀತ ಸಂಯೋಜನೆಯೊಂದಿಗೆ ಮೂಡಿಬಂದಿದೆ. ಅವಿನಾಶ್ ಆರ್ಲಪದವು ಮತ್ತು ಜೀವನ್ ವಿಟ್ಲ ಛಾಯಾಗ್ರಹಣ ಮಾಡಿದ್ದಾರೆ.


ಗಾಯಕ ಮಾ‌. ಗೌರವ್ ಬಳ್ಪ ಗ್ರಾಮದ ಬೇಂಗನಡ್ಕ ರಮೇಶ್ ರೈ ಮತ್ತು ಶ್ರೀಮತಿ ಕವಿತಾ ರೈ ದಂಪತಿಯ ಪುತ್ರ. ಕಡಬದ ಆ್ಯನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ 5ನೇ ತರಗತಿ ವಿದ್ಯಾರ್ಥಿ.
ಈ ಭಕ್ತಿಗೀತೆಯನ್ನು ಯೂ ಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.