ಮರ್ಕಂಜ : ನಿವೃತ್ತರಾದ ಅಚ್ಚುತ ಪಿ.ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸಿ ಇಂದು(ಡಿ.31) ವೃತ್ತಿಯಿಂದ ನಿವೃತ್ತರಾದ ಅಚ್ಚುತ ಪಿ. ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಇಂದು ಮರ್ಕಂಜ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಆನಂದ ಬಾಣೂರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಚಿಪಿಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರ ಗುಂಡಿ, ಉಪಾಧ್ಯಕ್ಷರಾದ ಗೋವಿಂದ ಅಳವುಪಾರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಶ್ರೀಮತಿ ನಳಿನಿ, ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಎಂ.ಟಿ.., ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್, ಶಾಲಾ ವಿದ್ಯಾರ್ಥಿ ನಾಯಕ ಚಿಂತನ್ ಕೆಜಿ, ಎಸ್ ಡಿಎಂಸಿ ಉಪಾಧ್ಯಕ್ಷರಾದ ಧನಂಜಯ ಬಲ್ಕಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲೆ ಹಾಗೂ ಊರವರ ಪರವಾಗಿ ನಿವೃತ್ತ ಶಿಕ್ಷಕ ಅಚ್ಯುತ ಪಿ.ಯವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ನಳಿನಿ ಇವರು ಅಭಿನಂದನಾ ಭಾಷಣವನ್ನು ನೆರವೇರಿಸಿದರು. ಶ್ರೀಮತಿ ರುಕ್ಮಿಣಿ ಕೆ. ಸ್ವಾಗತಿಸಿ, ಶ್ರೀಮತಿ ಸುಜಯ ಕುಮಾರಿ ಬಿಡಿ ವಂದಿಸಿದರು. ಶ್ರೀಮತಿ ಮಲ್ಲಿಕಾ ಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭ ಅಚ್ಚುತ ಪಿ. ಇವರ ಪ್ರಾಥಮಿಕ ಶಾಲಾ ಶಿಕ್ಷಕರಾದ ಜನಾರ್ಧನ ಎಂಎಸ್ ಇವರನ್ನು ಹಾಗೂ ಶಿಕ್ಷಕ ಅಚ್ಚುತ ಮಾಸ್ತರ್ ರವರ ಶೈಕ್ಷಣಿಕ ಜೀವನಕ್ಕೆ ಪ್ರೇರಕ ಶಕ್ತಿಯಾಗಿದಂತಹ ಅವರ ಸಹೋದರಿ ಶ್ರೀಮತಿ ಚಂದ್ರಾವತಿ ಇವರನ್ನು ಅಚ್ಚುತರವರು ಸನ್ಮಾನಿಸಿದರು.