ಸಂಪಾಜೆ: ಚೆಡಾವು ಸ್ವಾಮಿ ಕೊರಗಜ್ಜ ದೈವ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೋಕ್ತೆಸರ, ಸಮಾಜ ಸೇವಕರಾದ ಎಂ.ಬಿ ಸದಾಶಿವ ಸುಳ್ಯರವರು ಸಾನಿಧ್ಯದಲ್ಲಿ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಿ ಎಲ್, ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಗೌರವಾಧ್ಯಕ್ಷ ಬಾಬು ಹೆಚ್.ಎಂ, ಅಧ್ಯಕ್ಷರಾದ ಹುಕ್ರಪ್ಪ ಪಿ, ಸದಸ್ಯರಾದ ಶಶಿಕುಮಾರ್ ಹೆಚ್.ಬಿ, ನಾರಾಯಣ ಹೆಚ್.ಸಿ, ಮೋಹನ, ಗಣೇಶ್, ಸಚಿನ್, ನಾಗೇಶ್, ಪುನೀತ್, ಶಿವು, ಸಂತೋಷ್ ಕುಮಾರ್ ಹಾಜರಿದ್ದರು.