ಅರಂತೋಡು ಹನುಮಾನ್ ಶಾಖೆಯ ವತಿಯಿಂದ ಶ್ರದ್ಧಾನಂದ ಬಲಿದಾನ್ ದಿವಸ ಕಾರ್ಯಕ್ರಮ

0

ವಿಶ್ವ ಹಿಂದೂ ಪರಿಷತ್ ಭಜರಂಗದಳ ದುರ್ಗವಾಹಿನಿ ಸುಳ್ಯ ಪ್ರಖಂಡ ಹಾಗೂ ಹನುಮಾನ್ ಶಾಖೆ ಆರಂತೋಡು ವತಿಯಿಂದ ಸ್ವಾಮಿ ಶ್ರದ್ಧಾನಂದ ಸ್ವಾಮೀಜಿ ಬಲಿದಾನ್ ದಿವಸ ಕಾರ್ಯಕ್ರಮವನ್ನು ಜ. 1 ರಂದು ಆಚರಿಸಲಾಯಿತು. ಸ್ವಾಮೀಜಿಯಾ ತತ್ವ ಸಿದ್ಧಾಂತದ ಬಗ್ಗೆ ಪ್ರಾಂತ ಧರ್ಮ ಪ್ರಸರಣ ಪ್ರಮುಖ್ ಕೃಷ್ಣ ಮೂರ್ತಿ ಯವರು ತಿಳಿಸಿದರು. ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಬಿ. ಯನ್. ಸತೀಶ್ ಉಪಸ್ಥಿತರಿದ್ದರು.

ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ್ ಭಟ್, ಪುತ್ತೂರು ಗ್ರಾಮಾಂತರ ಕಾರ್ಯದರ್ಶಿ ರವಿ ಕೈತಡ್ಕ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಸಹಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ತಾಲೂಕು ಭಜರಂಗದಳ ಸಂಚಾಲಕ ಸಂದೀಪ್ ವಳಲಂಬೆ ಹಾಗೂ ಪ್ರಖಂಡದ ಪದಾಧಿಕಾರಿಗಳಾದ ನವೀನ್ ಸುಳ್ಳಿ, ಸನತ್ ಚೊಕ್ಕಾಡಿ, ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು. ಹನುಮಾನ್ ಶಾಖೆಯ ಕಾರ್ಯದರ್ಶಿ ಶ್ರೀಜಿತ್ ಮಲ್ಲಡ್ಕ, ಭಜರಂಗದಳ ಸಂಚಾಲಕ ರವಿಚಂದ್ರ ಆಚಾರ್ಯ ಉಪಸ್ಥಿತರಿದ್ದರು. ಹನುಮಾನ್ ಶಾಖೆಯ ಕಾರ್ಯಕರ್ತರು ಕೋಡಂಕೇರಿ ಶಾಖೆಯ ಮಕ್ಕಳು ಭಾಗವಹಿಸಿದರು.

ಭಾನುಪ್ರಕಾಶ್ ಪೆರುಮುಂಡ ವಂದಿಸಿದರು. ಪವನಕುಮಾರ್ ಕೋಡಂಕೇರಿ ಕಾರ್ಯಕ್ರಮ ನಿರೂಪಿಸಿದರು.