ಸುಳ್ಯ ಬೀರಮಂಗಲ ನಾಗರಿಕಾ ಸಮಿತಿ ವಾರ್ಷಿಕೋತ್ಸವ

0

ಸುಳ್ಯ ಬೀರಮಂಗಲ ನಾಗರಿಕ ಸಮಿತಿ ಇದರ 23 ನೇ ವರ್ಷದ ವಾರ್ಷಿಕೋತ್ಸವವು ಡಿ.31ರಂದು ಉತ್ತರ ಬೀರಮಂಗಲದಲ್ಲಿ ನಡೆಯಿತು. ಬೆಳಿಗ್ಗೆ ಕ್ರೀಡಾಕೂಟವನ್ನು ರೆ. ಫಾ. ವಿಕ್ಟರ್ ಡಿಸೋಜ ರವರು ಉದ್ಘಾಟಿಸಿದರು.

ನಂತರ ನಿರಂತರವಾಗಿ ಸಾಯಂಕಾಲದವರೆಗೆ ಕ್ರೀಡಾಕೂಟ ನಡೆದು, ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಸಮಿತಿ ಅಧ್ಯಕ್ಷ ಅಪ್ಪು ವಹಿಸಿದರು..

ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತಾ, ಅಶ್ರಫ್ ಬೀರಮಂಗಲ, ಮಂಜುನಾಥ್ ಬಂಗ್ಲೆಗುಡ್ಡೆ. ಗೋಪಾಲ್ ರಾವ್ ಮಾಸ್ತರ್.. ಹೇಮಾ ಪ್ರಭಾ, ಗೀತಾ ರವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಪ್ರಶಸ್ತಿ ವಿಜೇತ ತಂಡ ಮಂಜು ಬ್ರದರ್ಸ್ ಸುಳ್ಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

2022 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಂಜುನಾಥ್ ಬಂಗ್ಲೆಗುಡ್ಡೆ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತುಳಸಿ. ಕೆ.ಬಿ ಹಾಗೂ ಜೆಸಿಐ ಇಂಡಿಯಾ ವಲಯಾಧ್ಯಕ್ಷ ರೋಯನ್ ಉದಯ ಕ್ರಾಸ್ತಾ ಇವರುಗಳನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮಹೇಶ್ ಬಂಗ್ಲೆಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.