ಪಂಜ: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ದಿನಾಚರಣೆ – ಪುರಸ್ಕಾರ

0

ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ’ಬಿ’ವಲಯ 15 ರ ವತಿಯಿಂದ
ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ದಿನಾಚರಣೆ ಮತ್ತು ಆದರ್ಶ ಯುವ ಪ್ರತಿಭೆಗೆ ಪುರಸ್ಕಾರ ಹಾಗು ವ್ಯಸನ ಮುಕ್ತ ಜನಜಾಗೃತಿ ಕಾರ್ಯಕ್ರಮ
ಜ.13ರಂದು ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮದ
ಸಭಾಧ್ಯಕ್ಷತೆಯನ್ನು ಜೇಸಿಐ ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ಕೆ .ವಿ ಉದ್ಘಾಟಿಸಿದರು.


ಯುವ ಚಿತ್ರಕಲಾವಿದ ಸುರೇಶ್ ಬಳ್ಳಕ ರವರನ್ನು ಪ್ರಾಂಶುಪಾಲ ಚಲಪತಿ ಕೆ.ವಿ.ಪುರಸ್ಕಾರಿದರು.ವ್ಯಸನ ಮುಕ್ತ ಜನಜಾಗೃತಿ ಬಗ್ಗೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಡಾ. ಮಂಜುನಾಥ್ ಮಾಹಿತಿ ನೀಡಿದರು. .ವೇದಿಕೆಯಲ್ಲಿ
ನಿಕಟಪೂರ್ವ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು
ಕಾರ್ಯಕ್ರಮ ನಿರ್ದೇಶಕ ಸುಬ್ರಹಮಣ್ಯ ಕುದ್ಪಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. ವಿಶ್ವಜೀತ್ ಅಲಾಜೆ ಪುರಸ್ಕೃತರನ್ನು ಪರಿಚಯಿಸಿದರು, ಕಿರಣ್ ಕಂರ್ಬು ನೆಕ್ಕಿಲ ಜೇಸಿ ವಾಣಿ ವಾಚಿಸಿದರು.ಕಾರ್ಯದರ್ಶಿ ಜೇಸಿ ವಾಚಣ್ಣ ಕೆರೆಮೂಲೆ ವಂದಿಸಿದರು.