ಐದು ಜನ ಭಾರತೀಯ ನಾಗರಿಕರನ್ನು ಉಗ್ರರಿಂದ ರಕ್ಷಿಸಿದ ಹಿನ್ನೆಲೆ

0

ಅರಂತೋಡು ಮೂಲದ ಯೋಧನಿಗೆ ಜನರಲ್ ಮೇಜರ್ ಅವರಿಂದ ಗೌರವ

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಐದು ಜನ ಭಾರತೀಯ ನಾಗರಿಕರನ್ನು ರಕ್ಷಿಸಿದ ಆರಂತೋಡು ಗ್ರಾಮದ
ಓಟೆಡ್ಕ ನಿವಾಸಿ ಆಕಾಶ್ ಅವರನ್ನು ಭಾರತೀಯ ಭೂಸೇನಾಧಿಕಾರಿ ಜನರಲ್ ಮೇಜರ್ ರವರು ಭಾರತೀಯ ಸೇನಾ ದಿನಾಚರಣೆ ಆದ ಇಂದು ( ಜ. 15 ರಂದು) ಗೌರವಿಸಿದರು.

ಆಕಾಶ್ ರವರು ಆರಂತೋಡು ಗ್ರಾಮದ ಓಟೆಯಡ್ಕ ಕಮಲಾಕ್ಷ ಅವರ ಪುತ್ರ.

ಆರಂತೋಡು ಎನ್.ಎಂ.ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿ.