ಪೆರಾಜೆ : ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ

0


ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲೆ, ಇದರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ವತಿಯಿಂದ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾಧಿಕಾರಿ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಕುರಿತಂತೆ ಮನವಿಯೊಂದನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆ ರೈತ ಮುಖಂಡರು ಅಡಿಕೆ ಬೆಳೆಗಾರ ರೈತರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಬಹಳ ವಿವರವಾಗಿ ಚರ್ಚೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಮನವಿಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ರೈತರು ಸರಕಾರದ ಮುಂದಿರಿಸಿದರು.


-ರೋಗಬಾದಿತವಾಗಿ ಹಾನಿಗೊಳಗಾದ ಅಡಿಕೆ ತೋಟಗಳಿಗೆ ಎಕ್ರೆವಾರ್ ಪರಿಹಾರ ನೀಡುವುದು, ಪರ್ಯಾಯ ಬೆಳೆಗಳಿಗೆ ಮತ್ತಷ್ಟು ಉತ್ತೇಜನ ನೀಡುವುದು, ಕೃಷಿಯಲ್ಲಿ ಯಾಂತ್ರಿಕೀಕರಣಕ್ಕೆ ಉತ್ತೇಜನ, ಜೇನು ಕೃಷಿಗೆ ಬೆಂಬಲ, ಅಡಿಕೆ ಬಾದಿತ ರೋಗಗಳ ಕುರಿತಂತೆ ವಿಜ್ಞಾನಿಗಳು ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಗ್ರಾಮ ಮಟ್ಟದಲ್ಲಿ ಸಂವಾದಗಳು ಹಮ್ಮಿಕೊಳ್ಳುವುದು, ದ್ರೋಣ್ ಮುಖಾಂತರ ನಡೆಸುವ ಕೀಟನಾಶಕಗಳ ಸಿಂಪರಣೆ ಕುರಿತಾಗಿ ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ರೈತರಿಗೆ ಮಾಹಿತಿ ನೀಡುವುದು, ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು.
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಕಾಡ್ಯ ಮಾಡ ಮನುಸೋಮಯ್ಯ ಮತ್ತು ಕಾರ್ಯದರ್ಶಿ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಉಪಸ್ಥಿತರಿದ್ದು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ಇದರ ಅಧ್ಯಕ್ಷರಾದ ಬಾಲಕೃಷ್ಣ , ಕಾರ್ಯದರ್ಶಿ ಶ್ರೀ ಪುರುಷೋತ್ತಮ ಬಂಗಾರಕೋಡಿ ಮತ್ತು ಘಟಕದ ಪದಾಧಿಕಾರಿಗಳಾದ ಗೋಪಾಲ ಪೆರಾಜೆ, ಉಮೇಶ ಕುಂಬಳಚೇರಿ,
ನೆಕ್ಕಿಲ ಗಂಗಾಧರ, ವೇಣುಗೋಪಾಲ ಕುಂದಲಪಾಡಿ ಮತ್ತು ಸಂಜೀವ ಕತ್ತಲಡ್ಕ ಹಾಜರಿದ್ದರು.