ನಾಳೆಯಿಂದ ಎರಡು ದಿನ‌ ಸುಳ್ಯದಲ್ಲಿ ಯುವಜನ ಜಾತ್ರೆ

0

ಆಹಾರ ಮೇಳ, ವಸ್ತು ಪ್ರದರ್ಶನ ದೊಂದಿಗೆ ಸಾಂಸ್ಕೃತಿಕ ವೈಭವ : ಭರ್ಜರಿ ತಯಾರಿ

ನಾಳೆಯಿಂದ (ಜ.21 ಮತ್ತು 22) ಎರಡು ದಿನಗಳ ಕಾಲ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಆವರಣದಲ್ಲಿ ಜಿಲ್ಲಾ ಯುವಜನ ಮೇಳ ನಡೆಯಲಿದ್ದು, ಮೇಳದ ಯಶಸ್ವಿಯಾಗಿ ಭರ್ಜರಿ ತಯಾರಿ ನಡೆದಿದೆ.

ಜ.21 ರಂದು ಬೆಳಗ್ಗೆ ಯುವಜನ ಮೆರವಣಿಗೆ ಗಾಂಧಿನಗರದಿಂದ ಆರಂಭಗೊಂಡು ಸುಳ್ಯ ನಗರದಲ್ಲಿ ಸಾಗಿ ಯುವಜನ ಸಂಯುಕ್ತ ಮಂಡಳಿ ವಠಾರಕ್ಕೆ ಬರಲಿದೆ. ಮಧ್ಯಾಹ್ನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ ಯಾಗುವುದು. ಸಂಜೆ ಯುವಜನ ಮೇಳದ ಉದ್ಘಾಟನೆ ನಡೆಯಲಿದೆ. ಸಚಿವರುಗಳಾದ ಸುನಿಲ್ ಕುಮಾರ್, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್, ಸಹಿತ ಹಲವು ಗಣ್ಯರು ‌ಭಾಗವಹಿಸಲಿದ್ದಾರೆ.

ಮೇಳದ ಆಕರ್ಷಣೆ ಹೆಚ್ಚಿಸಲು ಆಹಾರ ಮೇಳ, ವಸ್ತು ಪ್ರದರ್ಶನ ಗಳು ಇರಲಿದೆ.
ಎರಡು ದಿನದಲ್ಲಿ 20 ವಿವಿಧ ಸ್ಪರ್ಧೆಗಳು ನಡೆಯಲಿದ್ದು ಎರಡು ವೇದಿಕೆಯಲ್ಲಿ ಸ್ಪರ್ಧೆಗಳು ನಡೆಯುವುದು.

ಯುವಜನ ಮೇಳದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ತಾಲೂಕುಗಳಿಂದ ನೂರಾರು ಸ್ಪರ್ಧಿಗಳು ಆಗಮಿಸಲಿದ್ದು ಅವರಿಗೆ ಬೇಕಾದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

ಎರಡು ದಿನಗಳ ಕಾಲ ಯುವಜನ ಮೇಳದೊಂದಿಗೆ ಸಾಂಸ್ಕೃತಿಕ ಸಂಭ್ರಮವು ಯುವಜನ ಸಂಯಕ್ತ ಮಂಡಳಿ ವಠಾರದಲ್ಲಿ ನಡೆಯಲಿದೆ.