ಕಾಯರ್ತೋಡಿ : ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಸುಳ್ಯ ನಗರ ಪಂಚಾಯತ್ ನ ಕಾಯರ್ತೋಡಿ ವಾರ್ಡ್ ಗೊಳಪಟ್ಟ ಗಾಂಧಿನಗರ ಅರಣ್ಯ ಇಲಾಖೆ ಬಳಿ ರಸ್ತೆಯನ್ನು ನಗರ ಪಂಚಾಯತ್ ಅನುದಾನ ರೂ.5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣ ಗೊಳಿಸಲಾಗಿದೆ.

ರಸ್ತೆಯ ಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿದರು. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ವಾರ್ಡ್ ಸದಸ್ಯೆ ಪ್ರವಿತಾ ಪ್ರಶಾಂತ್, ಬಿಜೆಪಿ ನಗರ ಶಕ್ತಿ ಕೇಂದ್ರ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ,ಸ್ಥಳೀಯರಾದ ನಿವೃತ್ತ ಎ.ಸಿ.ಎಫ್ ಶೀನ ಗೌಡ, ದೇವರಾಜ ಹೊದ್ದೆಟ್ಟಿ, ಸದಾನಂದ ಮೂಲೆಮಜಲು, ಕರುಣಾಕರ ಅಡ್ಯಡ್ಕ ಮೊದಲಾದವರಿದ್ದರು.
ಗುತ್ತಿಗೆದಾರ ಚಿದಾನಂದ ಕುದ್ಪಾಜೆ ಸ್ವಾಗತಿಸಿ, ಹಿಂ.ಜಾ.ವೇದಿಕೆ ನಗರ ಸಹ ಸಂಚಾಲಕ ಪ್ರಶಾಂತ್ ಕಾಯರ್ತೋಡಿ ವಂದಿಸಿದರು. ಭವಾನಿಪ್ರಸಾದ್ ಎನ್. ಕಾರ್ಯಕ್ರಮ ನಿರೂಪಿಸಿದರು.