ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮಣಿಯಾನ ಪುರುಷೋತ್ತಮ ರವರಿಗೆ ಗೌರವ

0


ನಿವೃತ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಮಣಿಯಾನ ಪುರುಷೋತ್ತಮ ರವರನ್ನು ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮೇ 2ರಂದು ಸನ್ಮಾನಿಸಿ ಗೌರವಿಸಲಾಯಿತು.
ಗುತ್ತಿಗಾರಿನಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಧನಪತಿಯವರು ಗೌರವಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದರು. ಕಿರಣ ಸಂಸ್ಥೆ ಅಧ್ಯಕ್ಷ ಯೋಗೀಶ ಹೊಸೋಳಿಕೆ, ಪಂಚಾಯತ್ ಮಾಜಿ ಸದಸ್ಯೆ ಮಿತ್ರಾಕುಮಾರಿ ಚಿಕ್ಮುಳಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಗುರುಪ್ರಸಾದ್, ಗ್ರಂಥಪಾಲಕಿ ಅಭಿಲಾಷ ಮೊಟ್ನೊರು ಉಪಸ್ಥಿತರಿದ್ದರು.