ಬೆಳ್ಳಾರೆ : ಸ್ವಸಹಾಯ ಸಂಘಗಳ ತಾಲೂಕು ಮಟ್ಟದ ಘಟ ಸಮಿತಿ ಪದಾಧಿಕಾರಿಗಳ ಆಯ್ಕೆ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೆಳ್ಳಾರೆ ಸ್ವಸಹಾಯ ಸಂಘಗಳ ತಾಲೂಕು ಮಟ್ಟದ ಘಟ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಜ.8ರಂದು ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸುಹಾಸ್ ಮುರುಳ್ಯ, ಉಪಾಧ್ಯಕ್ಷರಾಗಿ ವಿನೋದ್ ಬಳ್ಪ, ಕಾರ್ಯದರ್ಶಿಯಾಗಿ ಸಂದೀಪ್ ಸುಳ್ಯ, ಜತೆ ಕಾರ್ಯದರ್ಶಿಯಾಗಿ ಜಾನಕಿ ಆಲೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಮ್ ಗುತ್ತಿಗಾರು, ಇವರನ್ನು ಆಯ್ಕೆ ಮಾಡಲಾಯಿತು.


ವೇದಿಕೆಯಲ್ಲಿ ತಾಲೂಕು ಘಟ ಸಮಿತಿಯ ಅಧ್ಯಕ್ಷರಾಗಿದ್ದ ವಿಶ್ವನಾಥ ಶೆಟ್ಟಿ, ಸುಳ್ಯ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನಿರ್ದೇಶಕರಾದ ಕಿರಣ್ ಊರ್ವ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಸುರೇಶ್ ರೈ, ಒಡಿಯೂರು ರಥೋತ್ಸವದ ಹೊರೆ ಕಾಣಿಕೆ ಸಮಿತಿಯ ಸಂಚಾಲಕರಾದ ದೇವಿ ಪ್ರಸಾದ್ ಮಂಗಳೂರು, ಒಡೆಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಗೀತಾ ನೆಟ್ಟಾರು, ಬೆಳ್ಳಾರೆ ವಲಯ ಅಧ್ಯಕ್ಷರಾದ ವೀರನಾಥ ಉಪಸ್ಥಿತರಿದ್ದರು ಬೆಳ್ಳಾರೆ ವಲಯ ಸಂಯೋಜಕಿ ಶ್ರೀಮತಿ ಶೀಭಾ ರೈ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗುತ್ತಿಗಾರು ವಲಯದ ಸಂಯೋಜಕ ಶ್ರೀಮತಿ ಸವಿತಾ ವಂದಿಸಿದರು.