ಅರಂತೋಡು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0


ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿಧ್ಯಾರ್ಥಿ ಸಂಘದ ಸಭೆಯ ಜನವರಿ 21 ರಂದು ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಯು.ಎಂ ಕಿಶೋರ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಪ್ರಾಸ್ತಾವಿಕ ಮಾತುಗಳನ್ನಾಡಿ ಹಿರಿಯ ವಿಧ್ಯಾರ್ಥಿಗಳು ಶಾಲೆಯ ಅಭಿವ್ರದ್ಧಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು. ಸಭೆಯಲ್ಲಿ ನೂತನ ಹಿರಿಯ ವಿಧ್ಯಾರ್ಥಿ ಸಂಘವನ್ನು ರಚಿಸಲಾಯಿತು. ಅಧಕ್ಷರಾಗಿ ಸತೀಶ್ ನಾಯ್ಕ ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಕಲ್ಲಗದ್ದೆ, ಉಪಾಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಜೊತೆ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ಕೊಡಂಕೇರಿ, ಕೋಶಾಧಿಕಾರಿಯಾಗಿ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ನಿರ್ದೇಶಕರಾಗಿ ಎ.ವಿ. ತೀರ್ಥರಾಮ ಅಡ್ಕಬಳೆ, ಶಿವಾನಂದ ಕುಕ್ಕುಂಬಳ, ಅಶ್ರಫ್ ಗುಂಡಿ, ಯು.ಎಂ ಕಿಶೋರ್ ಕುಮಾರ್ ಮಲ್ಲಡ್ಕ, ಶಿವರಾಮ ನೆಡ್ಚಿಲು, ಪಸೀಲು ಎ. ಲಕ್ಷ್ಮಿನಾರಾಯಣ ಉಳುವಾರು, ಹರೀಶ್ ಉಳುವಾರು, ಪ್ರವೀಣ್ ಎಳ್ಪಕಜೆ, ಯಶೀಲ ಬೆಳ್ಯಪ್ಪ ಕೊಡಂಕೇರಿ, ಮಮತ ಬಾಜಿನಡ್ಕ ಆಯ್ಕೆಯಾದರು. ಶತಮಾನ ಸಮಿತಿ ಅಧ್ಯಕ್ಷ ಎ.ವಿ. ತೀರ್ಥರಾಮ ಸ್ವಾಗತಿಸಿದರು. ಅಶ್ರಫ್ ಗುಂಡಿ ವಂದಿಸಿದರು. ಗೋಪಾಲಕೃಷ್ಣ ಬನ ನಿರೂಪಿಸಿದರು.