ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಷನ್ ರಿ.ಇದರ ಆಶ್ರಯದಲ್ಲಿ ನಡೆಯುವ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮಕ್ಕೆ ಚಾಲನೆ

0

ಸುಳ್ಯ ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ರಿ. ಇದರ ಆಶ್ರಯದಲ್ಲಿ ನಡೆಯರುವ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜ 27 ರಂದು ಗಾಂಧಿನಗರ ಮುನವ್ವರುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ವಹಿಸಿದ್ದರು.
ಅಸ್ಸಯ್ಯಿದ್ ಕುಂಞಿ ಕೋಯ ತಂಙಳ್ ಸಅದಿ ನಾವೂರು ದುವಾ ನೆರವೇರಿಸಿ ಪ್ರಾಸ್ತವಿಕ ಮಾತನಾಡಿ ಕಾರ್ಯಕ್ರಮ ಉದ್ಘಾಟಿಸಿ ವಾರ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಖ್ಯಾತ ವಾಗ್ಮಿ ಅಲ್ ಹಾಜ್ ಹಾಫಿಲ್ ಮಾಶಹೂದ್ ಸಖಾಫಿ ಗೂಡಲ್ಲೂರು ಭಾಗವಹಿಸಿ ಮುಖ್ಯ ಪ್ರಭಾಷಣ ನಡೆಸಿದರು.
ವೇದಿಕೆಯಲ್ಲಿ ಸ್ಥಳೀಯ ಮಸೀದಿ ಖತಿಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿ,ಮುದರ್ರಿಸ್ ಸರಫುದ್ದೀನ್ ಸಅದಿ, ಅನ್ಸಾರಿಯ ಜುಮಾ ಮಸ್ಜಿದ್ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ,ಪೈಚಾರ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುನೀರ್ ಸಖಾಫಿ, ಗಾಂಧೀನಗರ ಮಸೀದಿ ಕಮಿಟಿ ಉಪಾಧ್ಯಕ್ಷ ಕೆ ಎಂ ಮಹಮ್ಮದ್ ಕೆ ಎಂ ಎಸ್,ಮಾಜಿ ಅಧ್ಯಕ್ಷ ಹಾಜಿ ಎಸ್ ಆದಂ ಕುಂಞಿ ಕಮ್ಮಾಡಿ,ಎ ಎಂ ಎ ಸಲಹಾ ಸಮಿತಿ ಸದಸ್ಯರಾದ ಕೆ ಬಿ ಮಹಮ್ಮದ್,ದ ಕ ಜಿಲ್ಲಾ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಂಘಟನಾ ಕಾರ್ಯಧರ್ಶಿ ಎಸ್ ಸಂಶುದ್ದಿನ್,ಎ ಎಂ ಎ ಅಧ್ಯಕ್ಷ ಹಾಜಿ ಶುಕೂರ್, ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಮದರಸ ಸದರ್ ಮುಅಲ್ಲಿಮ್ ಇಬ್ರಾಹಿಂ ಸಕಾಫಿ ಪುಂಡೂರ್ ಸ್ವಾಗತಿಸಿ ಸಿದ್ದೀಕ್
ಫ್ರುಟ್ಸ್ ನಿರೂಪಿಸಿದರು.
ಸಮಿತಿ ಪದಾಧಿಕಾರಿಗಳಾದ ಉಪಾಧ್ಯಕ್ಷ ಜುನೈದ್ ಎನ್ ಎ, ಹಾಗೂ ಖಾಲಿದ್ ಬೀಜ ಕೊಚ್ಚಿ, ಪ್ರಧಾನ ಕಾರ್ಯದರ್ಶಿ ಹನೀಫ್ ಬಿ ಎಂ ಕೋಶಾಧಿಕಾರಿ ಎಸ್ ಪಿ ಅಬೂಭಕ್ಕರ್ ,ಕಾರ್ಯದರ್ಶಿ ಸಂಶುದ್ದೀನ್ ಕೆ ಬಿ,ಬಶೀರ್ ಸಪ್ನಾ,ನಿರ್ದೇಶಕರಾದ ಹಾಜಿ ಐ ಇಸ್ಮಾಯಿಲ್,ಹಾಜಿ ಅಬ್ದುಲ್‌ ಗಫಾರ್, ಅಬ್ದುಲಾ ಹಾಜಿ ಕಟ್ಟೆಕ್ಕಾರ್, ಪಾರೆ ಅಬ್ದುಲ್‌ ಖಾದರ್,ಅಬ್ದುಲ್‌ ಖಾದರ್ ಎಂ ಟಿ, ಕೆ ಬಿ ಇಬ್ರಾಹಿಂ,ಕೆ ಬಿ ಮುಜೀಬ್, ಶಾಫಿ ಕುತ್ತಮೊಟ್ಟೆ,ಹಾಜಿ ಅಬ್ದುಲ್‌ ಹಮೀದ್ ಜನತಾ,ಹಮೀದ್ ಚಾಯ್ಸ್,ಲತೀಫ್ ಹರ್ಲಡ್ಕ, ಯಾಕುಬ್ ಪಂಜಿಕ್ಕಲ್ಲು,ಎಂ ಕೆ ಅಬ್ದುಲ್‌ ಲತೀಫ್, ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಬಿ ಎ ನಾವೂರ್,ಅಬ್ದುಲ್‌ ರಜಾಕ್ ಕರಾವಳಿ,ಶಹೀದ್ ಪಾರೆ ಸದಸ್ಯರು, ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದರು.