ಮರ್ಕಂಜದ ಶ್ರಾವ್ಯ ಬಿ.ಜೆ.ಯ ವೈದ್ಯಕೀಯ ನೆರವಿಗಾಗಿ ರೆಂಜಾಳ ಜಾತ್ರೋತ್ಸವದಲ್ಲಿ ಯುವಕರಿಂದ ಧನ ಸಂಗ್ರಹ

0

ನೆರವಿನ ಹಸ್ತ ಚಾಚಿದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲ

ನೀವು ಕೈಜೋಡಿಸಿ…

ಮರ್ಕಂಜದ ಜಗದೀಶ ಬಲ್ಕಾಡಿ ಎಂಬವರ 4 ವರ್ಷ ಪ್ರಾಯದ ಪುತ್ರಿ ಶ್ರಾವ್ಯ ಕಳೆದ ಎರಡೂವರೆ ವರ್ಷಗಳಿಂದ ನರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ವೈದ್ಯಕೀಯ ಚಿಕಿತ್ಸೆಯ ನೆರವಿಗಾಗಿ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಮುಂದಾಗಿದ್ದಾರೆ.

ರೆಂಜಾಳ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರೋತ್ಸವದ ಸಂದರ್ಭದಲ್ಲಿ ನೆರವು ಸಂಗ್ರಹಿಸಲಾಗುತ್ತಿದ್ದು, ನಿನ್ನೆ (ಜ.30) ಕ್ಷೇತ್ರದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಬಳ್ಳಕ್ಕಾನ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಂಚಸ್ಥಾಪನೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಯುವಕ ಮಂಡಲದ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ, ಕಾರ್ಯದರ್ಶಿ ಶಿವರಂಜನ್ ರಾವ್, ದೇವಸ್ಥಾನದ ವಿವಿಧ ಸಮಿತಿಯ ಪುಟ್ಟಣ್ಣ ಗೌಡ ಬಾಣೂರು, ಸತೀಶ್ ರಾವ್ ದಾಸರಬೈಲು, ಜಗನ್ಮೋಹನ ರೈ ರೆಂಜಾಳ, ಚಿನ್ನಪ್ಪ ಗೌಡ ಬೇರಿಕೆ, ಮನೋಹರ ರೈ ಹೈದಂಗೂರು, ರಾಜೇಶ ಮಾಸ್ತರ್ ರೆಂಜಾಳ, ಕುಮಾರಸ್ವಾಮಿ ರೆಂಜಾಳ ಪಂಚಸ್ಥಾಪನೆಯ ವ್ಯವಸ್ಥಪನಾ ಸಮಿತಿ ಸದಸ್ಯರು, ದೇವಾಲಯದ ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನೆರವು ನೀಡಲು ಇಚ್ಚಿಸುವವರು goole pay\ Phone pay : 9043662905 ಯ ಮೂಲಕವು ನೀಡಬಹುದಾಗಿದೆ.