ಇಂದು ಮತ್ತು ನಾಳೆ (ಫೆ.1 ಮತ್ತು 2 ರಂದು) ಮೇದಿನಡ್ಕದಲ್ಲಿ ಗ್ರಾಮ ದೈವ ಮೇನಾಲ ಉಳ್ಳಾಕುಲು ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಫೆ.1 ರಂದು ರಾತ್ರಿ ಕಾಂತಾರ ಚಿತ್ರ ಪ್ರದರ್ಶನ

ಅಜ್ಜಾವರ ಗ್ರಾಮದ ಗ್ರಾಮ ದೈವ ಮೇನಾಲದಲ್ಲಿ ಫೆ. ೦1 ಮತ್ತು ೦2ರಂದು ಮೇದಿನಡ್ಕ ಶ್ರೀ ಉಳ್ಳಾಕುಲು ಮಾಡ ಚಾವಡಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಇರ್ವೇರು ಉಳ್ಳಾಕುಲು ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.


ಫೆ.೦೧ರಂದು ಬೆಳಗ್ಗೆ ಗಂಟೆ 6-೦೦ ರಿಂದ ನಾಗತಂಬಿಲ (ಮೇದಿನಡ್ಕದಲ್ಲಿ),ಬಳಿಕ ಶ್ರೀ ಉಳ್ಳಾಕುಲು ಚಾವಡಿಯಲ್ಲಿ ಗಣಪತಿ ಹವನ, ಶುದ್ಧಿ ಕಲಶ ಮತ್ತು ದೈವಗಳಿಗೆ ತಂಬಿಲ, ಮೇದಿನಡ್ಕದಲ್ಲಿ ಉಗ್ರಾಣ ತುಂಬಿಸುವುದು.
ಸಂಜೆ ಮೇನಾಲ ಉಳ್ಳಾಕುಲು ಚಾವಡಿಯಿಂದ ಭಂಡಾರ ತೆಗೆದು ದೈಯರ ಮಂಟಪ, ರುದ್ರಚಾಮುಂಡಿ ಕಟ್ಟೆ, ಉಳ್ಳಾಕುಲ ಮಾಡಕ್ಕೆ ಹೋಗಿ ಮೇದಿನಡ್ಕ (ಕೊಡಿಯಡಿ) ದೈವ ನಡೆಯುವ ಸ್ಥಳಕ್ಕೆ ಬರುವುದು. ರಾತ್ರಿ ಅನ್ನಸಂತರ್ಪಣೆ (ಮೇದಿನಡ್ಕದಲ್ಲಿ) ರಾತ್ರಿ ೮ರಿಂದ ಕಾಂತಾರ ಚಿತ್ರ ಪ್ರದರ್ಶನ ನಡೆಯಲಿದೆ.


ಫೆ.೦೨ ಮುಂಜಾನೆ ಗಂಟೆ ೫ ರಿಂದ ಇರ್ವೆರು ಉಳ್ಳಾಕುಲು ದೈವದ ನೇಮ ನಡೆದ ಬಳಿಕ ಪ್ರಸಾದ ವಿತರಣೆ. ಬೆಳಗ್ಗೆ ೧೦ ನಾಯರ್ ದೈವ ಮತ್ತು ಪುರುಷ ದೈವದ ನೇಮೋತ್ಸವ ಮಧ್ಯಾಹ್ನ ಅನ್ನಸಂತರ್ಪಣೆ ಮಧ್ಯಾಹ್ನ ಬಳಿಕ ರುದ್ರಚಾಮುಂಡಿ ದೈವದ ನೇಮೋತ್ಸವ, ಅಪರಾಹ್ನ ವರ್ಣರ ಪಂಜುರ್ಲಿ ದೈವದ ನೇಮೋತ್ಸವ. ಸಾಯಂಕಾಲ ಮೇದಿನಡ್ಕದಿಂದ ಉಳ್ಳಕುಲು ಚಾವಡಿಗೆ ಭಂಡಾರ ತರುವುದು.