ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಷನ್ ಆಶ್ರಯದಲ್ಲಿ ನಡೆದ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ

0

ಸಮರೂಪ ಸಮಾರಂಭದಲ್ಲಿ ಸಾಮೂಹಿಕ ದುವಾ ನಡೆಸಿದ ದ. ಕ ಜಿಲ್ಲಾ ಸಂಯುಕ್ತ ಖಾಝಿ ಕೂರತ್ ತಂಗಳ್

ಸುಳ್ಯ ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ರಿ. ಇದರ ಆಶ್ರಯದಲ್ಲಿ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಜ 27 ರಿಂದ ಜ 29 ರವರೆಗೆ ಗಾಂಧಿನಗರ ಮುನವ್ವರುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಿತು.

ಜನವರಿ 27ರಂದು ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ವಹಿಸಿದ್ದರು.
ಅಸ್ಸಯ್ಯಿದ್ ಕುಂಞಿ ಕೋಯ ತಂಙಳ್ ಸಅದಿ ನಾವೂರು ದುವಾ ನೆರವೇರಿಸಿ ಪ್ರಾಸ್ತವಿಕ ಮಾತನಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಖ್ಯಾತ ವಾಗ್ಮಿ ಅಲ್ ಹಾಜ್ ಹಾಫಿಲ್ ಮಾಶಹೂದ್ ಸಖಾಫಿ ಗೂಡಲ್ಲೂರು ಭಾಗವಹಿಸಿ ಮುಖ್ಯ ಪ್ರಭಾಷಣ ನಡೆಸಿದರು.

ಜನವರಿ 28 ರಂದು ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಪ್ರಭಾಷಣಕಾರ ಅಲ್ ಹಾಜ್ ಅಬ್ದುಲ್ ರಝಕ್ ಅಬ್ರಾರಿ ಪತ್ತನಾಪುರಂ ಭಾಗವಹಿಸಿ ಪ್ರಭಾಷಣ ನೀಡಿದರು. ಸೈಯದ್ ತಾಹಿರ್ ಅಹ್ದಲಿ ತಂಗಳ್ ಸಅದಿ ಸುಳ್ಯ ಪ್ರಾರ್ಥನೆ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸುಳ್ಯ ಅನ್ಸಾರಿಯಾ ಎಜುಕೇಶನಲ್ ಸೆಂಟರ್ ಇದರ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಜನವರಿ 29ರಂದು ನಡೆದ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ಸಾಮೂಹಿಕ ಪ್ರಾರ್ಥನೆ ನಡೆಸಿ ನಸೀಹತ್ ನೀಡಿದರು.
ಸ್ಥಳೀಯ ಮಸೀದಿ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ವಹಿಸಿದ್ದರು.

ವೇದಿಕೆಯಲ್ಲಿ ಸ್ಥಳೀಯ ಮಸೀದಿ ಮುದರ್ರಿಸ್ ಸರಫುದ್ದೀನ್ ಸಅದಿ, ಅನ್ಸಾರಿಯ ಜುಮಾ ಮಸ್ಜಿದ್ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ,ಪೈಚಾರ್ ಬದ್ರಿಯಾ ಜುಮಾ ಮಸೀದಿ ಖತೀಬ್ ಮುನೀರ್ ಸಖಾಫಿ, ಗಾಂಧೀನಗರ ಮಸೀದಿ ಕಮಿಟಿ ಉಪಾಧ್ಯಕ್ಷ ಕೆ ಎಂ ಮಹಮ್ಮದ್ ಕೆ ಎಂ ಎಸ್,ಮಾಜಿ ಅಧ್ಯಕ್ಷ ಹಾಜಿ ಎಸ್ ಆದಂ ಕುಂಞಿ ಕಮ್ಮಾಡಿ,ಎ ಎಂ ಎ ಸಲಹಾ ಸಮಿತಿ ಸದಸ್ಯರಾದ ಕೆ ಬಿ ಮಹಮ್ಮದ್,ದ ಕ ಜಿಲ್ಲಾ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯಧರ್ಶಿ ಎಸ್ ಸಂಶುದ್ದಿನ್,ಎ ಎಂ ಎ ಅಧ್ಯಕ್ಷ ಹಾಜಿ ಶುಕೂರ್, ಕಾರ್ಯಧರ್ಶಿ ಹನೀಫ್, ಮಸೀದಿ ಕಮಿಟಿ ನಿರ್ದೇಶಕ ಹಾಜಿ ಐ ಇಸ್ಮಾಹಿಲ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಮದರಸ ಸದರ್ ಮುಅಲ್ಲಿಮ್ ಇಬ್ರಾಹಿಂ ಸಕಾಫಿ ಪುಂಡೂರ್ ಸ್ವಾಗತಿಸಿ ಸಿದ್ದೀಖ್ ಫ್ರೋಟ್ಸ್ ನಿರೂಪಿಸಿದರು.
ಸಮಿತಿ ಪದಾಧಿಕಾರಿಗಳು, ಸದಸ್ಯರು, ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದರು.