ಶೇಣಿ ಗರಡಿ ತಿರುವಿನಲ್ಲಿ ಸೊಲಾರ್ ಬೀದಿ ದೀಪ ಅಳವಡಿಕೆ

0

ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಣಿ ಎಂಬಲ್ಲಿ ಕೋಟಿ ಚೆನ್ನಯ ಗರಡಿಗೆ ಹೋಗುವ ರಸ್ತೆಯ ತಿರುವಿನಲ್ಲಿ ಸೋಲಾರ್ ಬೀದಿ ದೀಪವನ್ನು ಅಳವಡಿಸಲಾಯಿತು. ಈ ಪರಿಸರದವರ ಹಲವು ವರ್ಷಗಳ ಬೇಡಿಕೆಯಾಗಿದ್ದು ಇದೀಗ ಸ್ಥಳೀಯ ಪಂಚಾಯತ್ ಸದಸ್ಯರ ಆಸಕ್ತಿಯಿಂದ ಬೇಡಿಕೆ ಈಡೇರಿದೆ. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ ಮೇಲ್ತೋಟ, ಸದಸ್ಯರುಗಳಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಸೀತಾ ಹೆಚ್, ಸ್ಥಳೀಯರಾದ ಹೊನ್ನಪ್ಪ ಪೂಜಾರಿ ಕುಬಲಾಡಿ, ಸಚಿನ್ ಕುಳ್ಳಾಜೆ, ದಿನೇಶ್ ಕುಳ್ಳಾಜೆ, ಪಂಚಾಯತ್ ಸಿಬ್ಬಂದಿ ಹರೀಶ್ ಸಿಡ್ಲುಕಜೆ ಮತ್ತಿತರರು ಉಪಸ್ಥಿತರಿದ್ದರು.