ಪುಲ್ವಾಮ ದಾಳಿಯಲ್ಲಿ ಹುತಾತ್ಮ ಯೋಧರಿಗೆ ವಿ.ಹಿಂ.ಪ, ಭಜರಂಗದಳ ನುಡಿ ನಮನ

0

ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಅಯೋದ್ಯೆ ಶಾಖೆ ಏಲಿ ಮಲೆ ಇದರ ವತಿಯಿಂದ ಮಿತ್ರ ಬಳಗ ಎಲಿ ಮಲೆ ಇದರ ಕಚೇರಿಯಲ್ಲಿ ಫೆ.14ರಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿನಮನ ನಡೆಯಿತು.


ಮಿತ್ರ ಬಳಗದ ಅಧ್ಯಕ್ಷರು ಉದಯ ಕುಮಾರ್ ಚಳ್ಳ ನುಡಿ ನಮನ ಸಲ್ಲಿಸಿದರು. ಸುಳ್ಯ ವಿಶ್ವ ಹಿಂದೂ ಪರಿಷತ್ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಬಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಏಲಿಮಲೆ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರಂಜಿತ್, ಸಹ ಕಾರ್ಯದರ್ಶಿ ಬಾನುಪ್ರಕಾಶ್ ಪೆರುಮುಂಡ, ತಾಲೂಕು ವಿಧಿ ಪ್ರಮುಖ ಸಂದೀಪ್ ವಳಲಂಬೆ, ತಾಲೂಕು ಸೇವಾ ಪ್ರಮುಖ ಬಾನುಪ್ರಕಾಶ್ ಪೆಲತಡ್ಕ, ಏಲಿಮಲೆ ಶಾಖೆ ಸಂಚಾಲಕ ಪ್ರಶಾಂತ್ ಅಂಬೇಕಲ್ಲು, ಕಾರ್ಯದರ್ಶಿ ಸುನಿಲ್ ಸುಳ್ಳಿ, ಜಯಂತ್ ಹರ್ಲಡ್ಕ ಹಾಗೂ ಕಾರ್ಯಕರ್ತರು ಭಾಗವಹಿಸಿದರು.