ಸುಳ್ಯ : ಕಾನೂನು ವಿಶ್ವವಿದ್ಯಾಲಯದ ಯುವ ಸಂಭ್ರಮ 2022-23

0

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವಲಯ ಮಟ್ಟದ ಅಂತರ್ ಕಾಲೇಜು “ಯುವ ಸಂಭ್ರಮ’ವು ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿಯಲ್ಲಿ ಫೆಬ್ರವರಿ ೨೪, ೨೫ರಂದು ನಡೆಯಿತು. ಕೆ.ವಿ.ಜಿ ಕಾನೂನು ಮಹಾವಿದ್ಯಾಲಯ ಸುಳ್ಯ ಇಲ್ಲಿನ ವಿದ್ಯಾರ್ಥಿಗಳು ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿ ಎಸ್. ಎಮ್ ಖದೀಜತ್ ಲೀನಾ ಕಾರ್ಟೂನಿಂಗ್ ಸ್ವರ್ಧೆಯಲ್ಲಿ ಬಹುಮಾನವನ್ನು ಗಳಿಸಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ಇವರ ನೇತೃತ್ವದಲ್ಲಿ ಕಾಲೇಜಿನ ಸಾಂಸ್ಕ್ರತಿಕ ಸಂಯೋಜಕರಾದ ಉಪನ್ಯಾಸಕಿಯರಾದ ಶ್ರೀಮತಿ ಉಷಾ ಸಿ ಶೆಟ್ಟಿ ಮತ್ತು ರಶ್ಮಿ .ಹೆಚ್ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.