ಕೇರ್ಪಡ ಕುಟುಂಬಸ್ಥರ ಮನೆಯಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪ್ರತಿಷ್ಠೆ ಹಾಗೂ ನೇಮೋತ್ಸವವು ಬ್ರಹ್ಮಶೀ ವೇದಮೂರ್ತಿ ಕೆಮ್ಮಿಂಜೇ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಫೆಬ್ರವರಿ 27ರಂದು ನಡೆಯಿತು.
ಫೆಬ್ರವರಿ 26ರಂದು ಸಂಜೆ ತಂತ್ರಿಗಳ ಆಗಮನ, ನಂತರ ವಾಸ್ತು ಬಲಿ, ವಾಸ್ತು ಹೋಮ, ಆಚಾರ್ಯವರಣ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಂತರ ಅನ್ನಸಂತರ್ಪಣೆ ನಡೆಯಿತು.
ಫೆಬ್ರವರಿ 27ರಂದು ಬೆಳಿಗ್ಗೆ ಗಂಟೆ 8:37ರಿಂದ 9: 33ರ ಒಳಗೆ ನಡೆಯುವ ಮೀನ ಲಗ್ನದಲ್ಲಿ ದೇವರ ಪ್ರತಿಷ್ಠೆ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೈವದ ಭಂಡಾರ ತೆಗೆದು ನಂತರ ದೈವಗಳ ನೇಮೋತ್ಸವ ನಡೆಯಿತು.