ಬಿಜೆಪಿ ಪ್ರಗತಿ ರಥ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಯಾಣ ಆರಂಭ

0

ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಭಾರತೀಯ ಜನತಾ ಪಾರ್ಟಿ ನೇತೃತ್ವದ ಪ್ರಗತಿ ರಥ ಪ್ರಯಾಣ ಆರಂಭಿಸಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸಾಧನೆ ಮತ್ತು ಜನಪರ ಯೋಜನೆಗಳನ್ನು ಒಳಗೊಂಡ ದೃಶ್ಯಾವಳಿಗಳನ್ನು ಬಿತ್ತರಿಸುವ ಪ್ರಗತಿ ರಥಕ್ಕೆ ಸುಳ್ಯದ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಪ್ರದಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹಾಗು ರಥ ಯಾತ್ರೆಯ ಜಿಲ್ಲಾ ಸಂಯೋಜಕ ಗುರುದತ್ತ್ ನಾಯಕ್, ಪ್ರಗತಿ ರಥ ಯಾತ್ರೆಯ ಸಂಚಾಲಕರದ ಶ್ರೀಕೃಷ್ಣ ಎಂ ಆರ್, ಸಹಸಂಚಾಲಕರಾದ ಮಹೇಶ್ ಕುಮಾರ್ ಮೇನಾಲ, ಯುವ ಮೋರ್ಚಾದ ಪ್ರಭಾರಿಗಳಾದ ಶಿವಾನಂದ ಕುಕುಂಬಳ, ಬಿಜೆಪಿ ಸುಳ್ಯ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮನುದೇವ್ ಪರಮಲೆ, ಉಪಾಧ್ಯಕ್ಷರಾದ ದಿಲೀಪ್ ಉಪ್ಪಳಿಕೆ, ಕಾರ್ಯದರ್ಶಿಗಳಾದ ಸಿಂಧು ಪ್ರಭು, ಅನಿಲ್ ಕೇರ್ನಡ್ಕ ಉಪಸ್ಥಿತರಿದ್ದರು.
ಪ್ರಗತಿ ರಥ ವಾಹನವು ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಗ್ರಾಮಗಳಿಗೆ ಸಂಚರಿಸಲಿದೆ.