ಊರ ಸಂಘ ಸಂಸ್ಥೆಗಳಿಂದ ಶ್ರಮ ಸೇವೆ ಆರಂಭ
ಮುಂದಿನ ವರ್ಷ ಮೇನಾಲದಲ್ಲಿ ವಯನಾಟ್ ಕುಲವನ್ ಕಳಿಯಾಟ ಮಹೋತ್ಸವ ಅದ್ದೂರಿಯಾಗಿ ನಡೆಯಲಿದ್ದು ಉತ್ಸವ ನಡೆಯುವ ಜಾಗದ ಸಮತಟ್ಟು ಕಾರ್ಯಕ್ರಮಕ್ಕೆ ಚಾಲನೆ ದೊರೆತ ಬಳಿಕ ಇದೀಗ ಸಂಘ ಸಂಸ್ಥೆಗಳವರು ಬಂದು ಶ್ರಮದಾನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾ.6ರಂದು ಶ್ರೀ ಮಹಾವಿಷ್ಣು ಯುವ ಸೇವಾ ಸಮಿತಿ ತುದಿಯಡ್ಕ, ಶ್ರೀಕೃಷ್ಣ ಭಜನಾ ಮಂದಿರ ಮೇನಾಲ, ಶ್ರೀ ವಿಷ್ಣು ಯುವಕ ಮಂಡಲ ಮೇನಾಲ ಇವರು ಶ್ರಮ ಸೇವೆ ನಡೆಸಿದರು.