ನಾವೂರು :ಎಸ್ ಎಂ ಎ ಬೆಳ್ಳಾರೆ ಝೋನಲ್ ವತಿಯಿಂದ ಪುಣ್ಯ ರಮಲಾನ್ ಸಿದ್ಧತಾ ಮಜ್ಲೀಸ್

0

ಸುನ್ನಿ ಮ್ಯಾನೆಜ್ ಮೆಂಟ್ ಅಷೋಸಿಯೇಶನ್ (ಎಸ್ ಎಂ ಎ) ಬೆಳ್ಳಾರೆ ಝೋನಲ್ ವತಿಯಿಂದ ರಂಜಾನ್ ತಿಂಗಳ ಆಗಮನದ ಅಂಗವಾಗಿ ಪುಣ್ಯ ರಮಲಾನ್ ಸಿದ್ಧತಾ ಮಜ್ಲೀಸ್ ಕಾರ್ಯಕ್ರಮ ಇಂದು ಸಂಘಟನೆಯ ಸುಳ್ಯ ರಿಜಿನಲ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿಯವರ ನಿವಾಸದಲ್ಲಿ ನಡೆಯಿತು.
ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಮಾತನಾಡಿ ‘ಪ್ರತಿಯೊಬ್ಬ ಮುಸಲ್ಮಾನರು ರಂಜಾನ್ ತಿಂಗಳಲ್ಲಿ ಅನುಸರಿಸಬೇಕಾದ ಪ್ರಾರ್ಥನ ಕಾರ್ಯ,ಈ ತಿಂಗಳಲ್ಲಿ ಬಡವರಿಗೆ ನೀಡಬೇಕಾದ ದಾನ ಧರ್ಮಗಳು, ಮನೆಯಲ್ಲಿ ಹೊಂದಿಸಿಕೊಳ್ಳಬೇಕಾದ ಆಹಾರ ಸಾಮಾಗ್ರಿಗಳ ತಯಾರಿ ಬಗ್ಗೆ,ರೋಗಿಗಳ ಸಂದರ್ಶನ ಮಾಡುವುದು, ಅನಾಥರಿಗೆ ಕಡು ಬಡವರಿಗೆ ಸಹಾಯ ಮಾಡುವುದು ವಿಷಯಗಳು ಕುರಿತು ಮಾಹಿತಿಯನ್ನು ನೀಡಿದರು’.

ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್, ಎಸ್ ಎಂ ಎ ಬೆಳ್ಳಾರೆ ಝೋನಲ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಬೀಡು, ಉಪಾಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ, ನಿರ್ದೇಶಕರಾದ ಸಂಸುದ್ದೀನ್ ಝಂಝಂ,ರೀಜಿನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಗೂನಡ್ಕ, ಎಸ್ ವೈ ಎಸ್ ಸಮಿತಿಯ ಮುಖಂಡರಾದ ಸಮೀರ್ ಮೊಗರ್ಪಣೆ,ಅಬೂಬಕ್ಕರ್ ಸಿದ್ದಿಕ್ ಕಟ್ಟೆಕರ್ಸ್,ಹಾಗೂ ಎಸ್ ಎಸ್ ಎಫ್ ಸಮಿತಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹಸನಿ ಮಾಡನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.