ಬೊಳಿಯಮಜಲು ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0


ಬೊಳಿಯಮಜಲಿನ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಏ. 1೦ ರಂದು ನೇಮೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಇಂದು ಬೆಳಿಗ್ಗೆ ದೈವಸ್ಥಾನದ ಸಂಕ್ರಮಣ ಪೂಜೆ ಬಳಿಕ ನಡೆಯಿತು. ತಂತ್ರಿಗಳಾದ ಶಂಭು ಭಟ್ ಚಾವಡಿಬಾಗಿಲುರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸ್ಥಳ ಮೊಕ್ತೇಸರ ನವೀನಕುಮಾರ್ ಕಜೆ ದಂಪತಿಗಳು, ಆಡಳಿತ ಸಮಿತಿ ಗೌರವಾಧ್ಯಕ್ಷ ಮೋನಪ್ಪ ಗೌಡ ಅಡ್ಕಬಳೆ, ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ, ಮಾಯಿಲ ಅಜಿಲ, ಪ್ರಧಾನ ಕಾರ್ಯದರ್ಶಿ ಮಾಧವ ಜಟ್ಟಿಪಳ್ಳ, ನಗರ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತಡ್ಕ, ಉತ್ಸವ ಸಮಿತಿ ಅಧ್ಯಕ್ಷ ರಘುನಾಥ್ ಜಟ್ಟಿಪಳ್ಳ, ಕಾರ್ಯದರ್ಶಿ ತೀರ್ಥಪ್ರಸಾದ್ ಜಟ್ಟಿಪಳ್ಳ , ಕೋಶಾಧಿಕಾರಿ ಚೇತನ್ ಜಟ್ಟಿಪಳ್ಳ, ನ್ಯಾಯವಾದಿ ತನುದೀಪ್ ಪೆಲತಡ್ಕ, ಸ್ಥಳೀಯರಾದ ಸೋಮಶೇಖರ್ ಬಿ. ಇನ್ನಿತರರು ಉಪಸ್ಥಿತರಿದ್ದರು.