ಅಮರಪಡ್ನೂರು ಸರಕಾರಿ ಶಾಲೆಗೆ ಮೇರ್ಕಜೆ ಚಿನ್ನಪ್ಪ ಗೌಡರ ಸ್ಮರಣಾರ್ಥ ದತ್ತಿನಿಧಿ ಸ್ಥಾಪನೆ

0

ಅಮರಪಡ್ನೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯರಾದ ಆರೋಗ್ಯ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ಮೇರ್ಕಜೆ ಗಿರಿಜಾ.ಎಮ್.ಗೌಡರು ದಿ.ಚೆನ್ನಪ್ಪ ಗೌಡ ಮೇರ್ಕಜೆ ಯವರ ಸ್ಮರಣಾರ್ಥವಾಗಿ ರೂ. 50 ಸಾವಿರ ದತ್ತಿನಿಧಿಯನ್ನು ಸುಳ್ಯ ವೆಂಕಟ್ರಮಣ ಕೋಆಪರೇಟಿವ್ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದು ವಾರ್ಷಿಕ ಬಡ್ಡಿ ಹಣವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರವಾಗಿ ನೀಡುವಂತೆಶಾಶ್ವತ ಠೇವಣಿ ಸರ್ಟಿಫಿಕೇಟ್ ನ್ನು
ಶಾಲೆಗೆಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಬಂಧುಗಳಾದ ಶ್ರೀಮತಿಮೀನಾಕ್ಷಿ ಗೌಡ, ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ, ಶ್ರೀಮತಿ ನೇತ್ರಾವತಿ ಪಡ್ಡಂಬೈಲು ಹಾಗೂ ಹಿರಿಯ ಸಾಹಿತಿಗಳಾದ ಶ್ರೀಮತಿ ಶೀಲಾವತಿ ಕೊಳಂಬೆ, ಲಕ್ಶ್ಮೀಶ ಚೊಕ್ಕಾಡಿ,
ಕ. ಸಾ. ಪ ಅಧ್ಯಕ್ಷ ಚಂದ್ರಶೇಖರ್ ಪೇರಾಲ್, ನ್ಯಾಯವಾದಿ ಜಯಪ್ರಕಾಶ್ ರೈ,
ಅಮರಮುಡ್ನೂರು ಗ್ರಾ.ಪಂ.ಸದಸ್ಯೆ ಶ್ರೀಮತಿ ಭುವನೇಶ್ವರಿ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ.ಸದಸ್ಯರು, ಶಾಲೆಯ ಶಿಕ್ಷಕರು, ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರೂಪವಾಣಿ ಸ್ವಾಗತಿಸಿದರು.
ಎಸ್ .ಡಿ.ಎಮ್.ಸಿ ಅಧ್ಯಕ್ಷ ಈಶ್ವರ ಕಾಯರ ವಂದಿಸಿದರು.