ಸುಳ್ಯ ಯುವಜನ ಸಂಯುಕ್ತ ‌ಮಂಡಳಿ ಆಶ್ರಯದಲ್ಲಿ ಯುವಕ – ಯುವತಿ ಮಂಡಲಗಳ ಕ್ರೀಡಾಕೂಟ

0

ಭಾರತ ಸರ್ಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಮತ್ತು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಯುವಕ/ಯುವತಿ ಮಂಡಲ ಗಳ ಕ್ರೀಡಾಕೂಟ -2023 ಯುವಜನ ಸಂಯುಕ್ತ ಮಂಡಳಿಯ ಆವರಣದಲ್ಲಿ ಮಾ.19 ರಂದು ನಡೆಯಿತು.

ನಿವೃತ್ತ ಕ್ಷೇತ್ರ ವಿಸ್ತರಣಾಧಿಕಾರಿ, ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಗೌಡ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು “ಯುವಕ*ಯುವತಿ ಮಂಡಲಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು, ತಮಗೆ ದೊರೆತ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಯುವಜನ ಸಂಯುಕ್ತ ಮಂಡಳಿ ಯುವಕ/ಯುವತಿ ಮಂದಲಗಳಿಗೆ ಅವಕಾಶ ನೀಡುವ ಮೂಲಕ ವನ್ನು ಪ್ರೋತ್ಸಾಹಿಸುತ್ತಿದೆ . ಕ್ರಿಯಾಶೀಲ ಯುವಜನರು ಅವಕಾಶಗಳ ಉಪಯೋಗದ ಮೂಲಕ ಸಾಧನೆಯ ಶಿಖರವೇರಬೇಕು “ಎಂದು ಅವರು ಹೇಳಿದರು.

ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಗದೀಶ್ ಸರಳಿಕುಂಜ ಮತ್ತು ಮಧುಕಿರಣ್ ಕೆ. ಯನ್ ಉಪಸ್ಥಿತರಿದ್ದರು. ಮಂಡಳಿಯ ಗೌರವ ಅಧ್ಯಕ್ಷರಾದ ದಯಾನಂದ ಕೇರ್ಪಳ ಮತ್ತು ಕಾರ್ಯದರ್ಶಿ ಸಂಜಯ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿ ತರಿದ್ದರು.
ಮಂಡಳಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ಸ್ವಾಗತಿಸಿ, ಸಂಜಯ ನೆಟ್ಟಾರು ಧನ್ಯವಾದಗೈದರು.