ಭಾರತೀಯ ಭೂಸೇನೆಯ ಕರ್ನಲ್ ಆಗಿ ಡಾl ಕೃಷ್ಣಪ್ರಸಾದ್ ಜಿ.ವಿ ಪದೋನ್ನತಿ

0

ದೇವಚಳ್ಳ ಗ್ರಾಮದ ತಳೂರಿನವರಾಗಿದ್ದು ಭಾರತೀಯ ಭೂಸೇನೆಯ ಡಾl ಕೃಷ್ಣಪ್ರಸಾದ್ ಜಿ ವಿ ಅವರು ಕರ್ನಲ್ ಆಗಿ ಪದೋನ್ನತಿಗೊಂಡಿದ್ದಾರೆ.
ಇವರು ದೇವಚಳ್ಳದ
ದಿ|ಡಾ ವಾಂತಿಚ್ಚಾಲು ಗೋಪಾಲಕೃಷ್ಣ ಭಟ್ ಮತ್ತು ಶ್ರೀಮತಿ ಅನುರಾದ ಜಿ ಭಟ್ ದಂಪತಿಗಳ ರ ಪುತ್ರ.
ಭಾರತೀಯ ಭೂಸೇನಾ ವೈದ್ಯಕೀಯ ದಳದಲ್ಲಿ ಕಳೆದ 20 ವರ್ಷಗಳಿಂದ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಕೃತ ಪಶ್ಚಿಮ ಬಂಗಾಲದ ಸಿಲಿಗುರಿ- ಬಾಗ್ ಡೋಗ್ರಾ ಸೇನಾ ಆಸ್ಪತ್ರೆ ಯಲ್ಲಿ ಕೆಲಸ ನಿರ್ವಹಿಸುತಿದ್ದು ಲೆಫ್ಟಿನಂಟ್ ಕರ್ನಲ್ ಆಗಿದ್ದರು. ಈಗ ಕರ್ನಲ್ ಆಗಿ ಪದೋನ್ನತಿ ಹೊಂದಿದ್ದಾರೆ.