ವಲಯಾರಣ್ಯಾಧಿಕಾರಿಗಳ ವರ್ಗಾವಣೆ

0

ಸುಳ್ಯಕ್ಕೆ ಮಂಜುನಾಥ್ – ಪಂಜಕ್ಕೆ ಗಿರೀಶ್ ಆರ್

ಸುಳ್ಯ‌ ಹಾಗೂ ಪಂಜ ವಲಯಾರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.

ಪಂಜ ವಲಯದಲ್ಲಿರುವ ಮಂಜುನಾಥ್ ರನ್ನು ಸುಳ್ಯ ರೇಂಜರ್ ಆಗಿ ಹಾಗೂ ಸುಳ್ಯದಲ್ಲಿರುವ ಗಿರೀಶ್ ಅವರನ್ನು ಪಂಜಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಜುನಾಥ್ ರವರು ಈ ಹಿಂದೆ ಸುಬ್ರಹ್ಮಣ್ಯ ವಲಯದಲ್ಲಿ ಹಾಗೂ ಸುಳ್ಯದಲ್ಲಿ ರೇಂಜರ್ ಆಗಿ ಕರ್ತವ್ಯ ನಿರ್ವಹಿಸಿ ಬಳಿಕ ಪಂಜಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಅವರಿಗೆ ಮತ್ತೆ ಸುಳ್ಯಕ್ಕೆ ವರ್ಗಾವಣೆಯಾಗಿದೆ.

ಗಿರೀಶ್ ಆರ್ ರವರು ಪಂಜ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಸುಳ್ಯಕ್ಕೆ ಬಂದಿದ್ದರು. ಇದೀಗ ಅವರಿಗೆ ಮತ್ತೆ ಪಂಜಕ್ಕೆ ವರ್ಗಾವಣೆಯಾಗಿದೆ.