ಗುತ್ತಿಗಾರು : ಬಟ್ಟೆ ಚೀಲ ತಯಾರಿಕಾ ಘಟಕ ಉದ್ಘಾಟನೆ

0

ಅಮೃತ ಯೋಜನೆಯಡಿಯಲ್ಲಿ ಮಹಿಳಾ ನಿಗಮ ಮಂಡಳಿಯಿಂದ ನೀಡಲಾದ ಒಂದು ಲಕ್ಷ ವೆಚ್ಚದಲ್ಲಿ ಸುಳ್ಯ ಯೋಜನೆಯ ಶ್ರೀ ಕೃಷ್ಣ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ಗುತ್ತಿಗಾರು ಇದರ ಸದಸ್ಯರು ಬಟ್ಟೆ ಚೀಲ ತಯಾರಿಕಾ ಘಟಕವನ್ನು ತೆರೆದಿದ್ದು,
ಇತ್ತೀಚೆಗೆ ಗುತ್ತಿಗಾರ್ ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಗುತ್ತಿಗಾರು ಜನ ಶಿಕ್ಷಣ ನಿಲಯದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಕೆ.ಎಂ, ಗುತ್ತಿಗಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ
ಉಪಸ್ಥಿತರಿದ್ದರು.

ಗುತ್ತಿಗಾರು ಗೊಂಚಲಿನ ಅಧ್ಯಕ್ಷೆ ಸಲಿನಾ, ಶ್ರೀಕೃಷ್ಣ ಸ್ತ್ರೀಶಕ್ತಿ ಗುಂಪಿನ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಲಲಿತಾ ಶ್ರೀಧರ್, ಅಧ್ಯಕ್ಷೆ ಶ್ರೀಮತಿ ಎಂ.ಜಿ ದಿವ್ಯ, ವಿಶ್ವನಾಥ್ ಹಾಗೂ ಕಾರ್ಯದರ್ಶಿ ಶ್ರೀಮತಿ ಯಶೋಧ ಶಿವರಾಮ ದೇವ ಹಾಗೂ ಗುಂಪಿನ ಎಲ್ಲಾ ಸದಸ್ಯರು ಹಾಜರಿದ್ದರು.

ಶ್ರೀಮತಿ ಮಹಾದೇವಿ ಕಿಶೋರ್ ಕುಮಾರ್ ಪ್ರಾರ್ಥಿಸಿ, ಶ್ರೀಮತಿ ಅನಿತಾ ನವೀನ್ ಸ್ವಾಗತಿಸಿದರು. ಶ್ರೀಮತಿ ಅನಿತಾ ಮಹೇಶ್ ವಂದಿಸಿದರು.