ಗುತ್ತಿಗಾರು ಗ್ರಾ.ಪಂ ಸದಸ್ಯ ಪ್ರೇಮ ವಿವಾಹ

0

ಗುತ್ತಿಗಾರು ಗ್ರಾ.ಪಂ ಸದಸ್ಯ ಜಗದೀಶ್ ಬಾಕಿಲ ಎಂಬವರು ದೇವಚಳ್ಳ ಗ್ರಾಮದ ಅಡ್ಢನಪಾರೆ ಯುವತಿ ಯೋರ್ವರನ್ನು ಪ್ರೇಮ ವಿವಾಹ ಆಗಿರುವುದಾಗಿ ತಿಳಿದು ಬಂದಿದೆ.

ಗುತ್ತಿಗಾರಿನ ಬಾಕಿಲದ ಆನಂದ ಎಂಬರ ಪುತ್ರ ಜಗದೀಶ್ ಮತ್ತು ದೇವಚಳ್ಳ ಗ್ರಾಮದ ಅಡ್ಡನಪಾರೆ ಅಚ್ರಪ್ಪಾಡಿ ಮನೆ ದಿ.ಜನಾರ್ದನ ಅವರ ಪುತ್ರಿ ಪ್ರತಿಮಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತಿದ್ದರೆನ್ನಲಾಗಿದೆ. ಆದರೆ ಮದುವೆಗೆ ಹುಡುಗಿ ಕಡೆಯವರ ವಿರೋಧವಿತ್ತೆನ್ನಲಾಗಿದೆ. ಆದ್ದರಿಂದ ಮನೆ ಬಿಟ್ಟು ತೆರಳಿದ ವಧು ಮತ್ತು ವರ ಮಂಗಳೂರಿನ ಕಡೆ ಮದುವೆ ಯಾಗಿದ್ದು ವಿವಾಹ ನೋಂದಣಿ ಮಾಡಿರುವುದಾಗಿ ತಿಳಿದು ಬಂದಿದೆ.

ಯುವತಿಯ ತಾಯಿ ಸುಬ್ರಹ್ಮಣ್ಯ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ದೂರು ದಾಖಲಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯನ್ನು ಸಂಪರ್ಕಿಸಿರುವ ವಧೂವರ ತಾವು ಮದುವೆ ಆಗಿರುವ ಮಾಹಿತಿ ನೀಡಿದ್ದು ಠಾಣೆಗೆ ರಿಪೋರ್ಟ್ ಆಗುವುದಾಗಿ ಮಾಹಿತಿ ನೀಡಿದ್ದಾರೆ.