ಸುಬ್ರಹ್ಮಣ್ಯದಲ್ಲಿ ಸೀನಿಯರ್ ಚೇಂಬರ್ ಸ್ಥಾಪಕರ ದಿನಾಚರಣೆ

0


ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್, ಸುಬ್ರಹ್ಮಣ್ಯ ರೋಟರಿ ಕ್ಲಬ್, ಹಾಗೂ ಜೆಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಜಂಟಿ ಆಶಯದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ಸೀನಿಯರ್ ಪಿ.ಪಿ. ಪ್ರೇಮ ನಂದ್ ರವರ ಸ್ಥಾಪಕರ ದಿನಾಚರಣೆಯನ್ನು ಸುಬ್ರಹ್ಮಣ್ಯದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನಡೆಸಲಾಯಿತು.

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಸೀನಿಯರ್ ಅಧ್ಯಕ್ಷ ವಿಶ್ವನಾಥ ನಡುತೋಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆ ಮಜಲ್, ಕುಕ್ಕೆ ಶ್ರೀ ಜೆ. ಸಿ. ಐ. ಅಧ್ಯಕ್ಷ ಜೆ. ಸಿ. ಯೋಗನಾಥ್, ಜೇಸಿಐ. ಇಂಡಿಯಾ ಪೂರ್ವ ನಿರ್ದೇಶಕರುಗಳಾದ ಜೇಸಿ. ಚಂದ್ರಶೇಖರ ನಾಯರ್, ಜೆಸಿ. ಡಾI ರವಿ ಕಕ್ಕೆಪದವು, ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕಿ ಶ್ರೀಮತಿ ಮಲ್ಲಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಆಶ್ರಮ ಶಾಲಾ ಎಲ್ಲಾ ಮಕ್ಕಳಿಗೆ ಪೆನ್ನು, ಪೆನ್ಸಿಲ್, ಪ್ಯಾಡ್, ಕವರ್ ಮುಂತಾದವುಗಳನ್ನು ನೀಡಲಾಯಿತು. ಸೀನಿಯರ್ ವಿಶ್ವನಾಥ ನಡುತೋಟ ಸ್ವಾಗತಿಸಿದರು. ಶಾಲಾ ರೋ. ಗೋಪಾಲ್ ಎಣ್ಣೆ ಮಜಲ್, ರೋ. ಡಾlರವಿ ಕಕ್ಕೆಪದವು, ರೋ ಚಂದ್ರಶೇಖರ್ ನಾಯರ್, ಜೆ. ಸಿ. ಯೋಗನಾಥ್ ಮುಂತಾದವರು ಸ್ಥಾಪಕ ಅಧ್ಯಕ್ಷರ ಬಗ್ಗೆ ಮಾತನಾಡಿದರು. ವಾಲ್ಮೀಕಿ ಶಾಲಾ ಶಿಕ್ಷಕಿ ಮಲ್ಲಿಕಾ ಹೊಂದಿಸಿದರು.