ಎಣ್ಮೂರು : ಉಳ್ಳಾಕುಳ ನೇಮ ಮತ್ತು ಕಾಜುಕುಜಂಬ ನೇಮ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ವಾರ್ಷಿಕ ನೇಮೋತ್ಸವದ ಅಂಗವಾಗಿ ಏಪ್ರಿಲ್ ೩ ರಂದು ಬೆಳಿಗ್ಗೆ ಗಣಪತಿ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ರಾತ್ರಿ ಎಣ್ಮೂರು ಬೀಡಿನಿಂದ ಭಂಡಾರ ಬಂದು, ಉಳ್ಳಾಕುಳ ನೇಮ ಮತ್ತು ಕಾಜುಕುಜುಂಬ ದೈವದ ನೇಮ ನಡೆಯಿತು.
ನಂತರ ಕೈಕಾಣಿಕೆ, ಬೂಳ್ಯ ಪ್ರಸಾದ, ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಗರಡಿಯ ಅನುವಂಶಿಕ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಕಟ್ಟಬೀಡು ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು (ವರದಿ : ಎಎಸ್‌ಎಸ್ ಅಲೆಕ್ಕಾಡಿ)