ವರಣನ ಕೃಪೆಗಾಗಿ ಇಂದು ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಸೀಯಾಳಭಿಷೇಕ

0

ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಕೆರೆ, ಬಾವಿ, ನದಿಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗುತ್ತಿದೆ. ಒಂದು ಕಡೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗತೊಡಗಿದೆ. ಹೀಗಾಗಿ ಆದಷ್ಟು ಬೇಗ ವರುಣನ ಕೃಪೆ ಆಗಬೇಕೆಂದು ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಳೆ (ಎ.7) ಶ್ರೀ ದೇವಿಗೆ ಸೀಯಾಳಭೀಷೇಕ ನಡೆಸಿ ಪ್ರಾರ್ಥನೆ ನಡೆಯಲಿದೆ‌. ಈ ಕಾರ್ಯದಲ್ಲಿ ಊರ ಹಾಗೂ ಪರವೂರ ಭಕ್ತರು ಪಾಲ್ಗೊಳ್ಳಬೇಕೆಂದು ದೇವಾಲಯದ ಸಂಘಟನೆಯವರು ವಿನಂತಿಸಿದ್ದಾರೆ.