ಚುನಾವಣೆ ಹಿನ್ನೆಲೆ: ಸುಳ್ಯದಲ್ಲಿ ಕೇಂದ್ರ ಪೊಲೀಸ್ ಪಡೆ ಮತ್ತು ಪೊಲೀಸ್ ತುಕಡಿಗಳ ಪಥ ಸಂಚಲನ

0

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಕಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂದಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದಲ್ಲಿ 4 ಸಿ.ಆರ್.ಪಿ.ಎಪ್ ಪಡೆ ಆಗಮಿಸಿದ್ದು ಇಂದು ಸುಳ್ಯದ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್ ನೇತೃತ್ವದಲ್ಲಿ 2 CRPF ಪಡೆ ಹಾಗೂ ಒಂದು KSRP ತುಕಡಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥ ಸಂಚಲನ ನಡೆಯಿತು.


ನಾವೂರು, ಜಟ್ಟಿಪಳ್ಳ, ಶ್ರೀರಾಮ್ ಪೇಟೆ, ವಿವೇಕಾನಂದ ಸರ್ಕಲ್, ಕುರುಂಜಿ ಬಾಗ್, ಹಾಗೂ ರಥ ಬೀದಿಯಲ್ಲಿ ಪಥಸಂಚಲನ ನಡೆಸಿದರು.