ಮುಳ್ಯ ಅಟ್ಲೂರು ಮಹಾಗಣಪತಿ ಭಜನಾ ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಮತ್ತು ನಿಶಿಪೂರ್ಣ ಭಜನೆ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಶ್ರೀ ಮಹಾಗಣಪತಿ ಭಜನಾ ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಮತ್ತು ನಿಶಿಪೂರ್ಣ ಭಜನಾ ಕಾರ್ಯಕ್ರಮ ಎ. 8 ರಂದು ನಡೆಯಿತು. ಗಣಪತಿ ಹವನವಾಗಿ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಬಲಿವಾಡು ಕೂಟ ಹಾಗೂ ವರ್ಷಂಪ್ರತಿ ಜರುಗುವ ನಿಶಿಪೂರ್ಣ ಭಜನಾ ಕಾರ್ಯಕ್ರಮವು ಸೂರ್ಯಾಸ್ತದ ಸಮಯದಲ್ಲಿ ಆರಂಭಗೊಂಡು ಭಜನಾ ಸಂಕೀರ್ತನೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಡೆಯಿತು.
ರಾತ್ರಿ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು.

ಪ್ರಾತ: ಕಾಲ ಸೂರ್ಯೋದಯದ ಸಂದರ್ಭದಲ್ಲಿ ಭಜನೆಯು ಮಹಾಮಂಗಳಾರತಿಯೊಂದಿಗೆ ದೀಪ ವಿಸರ್ಜನೆ ಮಾಡಲಾಯಿತು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.