ಗೂನಡ್ಕ : ಮಹಿಳೆಗೆ ಇರಿಯಲು ಹೋದ ಯುವಕ – ವಿಷ ಸೇವಿಸಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು

0

ಸುಳ್ಯ ಗೂನಡ್ಕ ಸಜ್ಜನ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ವಸಂತ ಎಂಬವರು ಅಲ್ಲಿ ಮದುವೆ ಕಾರ್ಯಕ್ರಮ ಬಂದಿದ್ದ ಮಹಿಳೆಯೊರ್ವಳಿಗೆ ಸ್ಕ್ರೂ ಡ್ರೈವ್ ನಿಂದ ಇರಿಯಲು ಯತ್ನಿಸಿದರೆಂದೂ ಆ ವೇಳೆ ಆ ಮಹಿಳೆ ತಪ್ಪಿಸಿಕೊಂಡರೆಂದು ಹೇಳಲಾಗಿದೆ.

ಅದನ್ನು ಕಂಡ ಮದುವೆ ಸಭಾಂಗಣದಲ್ಲಿ ಸೇರಿದ ಜನರು ವಸಂತರನ್ನು ತಡೆದು ಹೊರಗೆ ಎಳೆದು ತಂದರೆಂದು ತಿಳಿದುಬಂದಿದೆ.

ಆ‌ ಮಹಿಳೆಗೆ ಬೈಯುತ್ತಾ ಆ ಯುವಕ ಅಲ್ಲಿಂದ ತೆರಳಿ ಪಕ್ಕದ ತೋಟದ ಬಳಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆಂದೂ‌ ಇದನ್ನು ಗಮನಿಸಿದ ಸ್ಥಳೀಯರು ವಸಂತರನ್ನು ಸುಳ್ಯ ಅಸ್ಪತ್ರೆಗೆ ಕರೆದುಕೊಂಡು ಬಂದರೆಂದೂ ತಿಳಿದು ಬಂದಿದೆ.

ಹೆಚ್ಚಿನ ವಿವರ ಇನ್ನಷ್ಟೆ ತಿಳಿದು‌ಬರಬೇಕಾಗಿದೆ.