ಐವರ್ನಾಡಿನಲ್ಲಿ ತ್ಯಾಜ್ಯ ಎಸೆದವರಿಗೆ ಪಂಚಾಯತ್ ನಿಂದ ದಂಡ

0

ತ್ಯಾಜ್ಯ ಎಸೆದವರಿಂದಲೆ ವಿಲೇವಾರಿ ಮಾಡಿಸಿದ ಪಂಚಾಯತ್

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿಕೇರಿ ಎಂಬಲ್ಲಿ ಎ.17 ರಂದು ತ್ಯಾಜ್ಯ ಎಸೆದ ಮೂಡಬಿದ್ರೆ ನಿವಾಸಿಗಳಿಗೆ ರೂ 5500.00 ದಂಡ ವಿಧಿಸಿದ ಘಟನೆ ಎ.19 ರಂದು ನಡೆದಿದೆ.


ಎ.17 ರಂದು ನಾಟಿಕೇರಿ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ಎ.18 ರಂದು ನಾಟಿಕೇರಿ ಪರಿಸರಕ್ಕೆ ಭೇಟಿ ನೀಡಿ ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿ ತ್ಯಾಜ್ಯ ಬಿಸಾಡಿದ ಮೂಡಬಿದ್ರೆಯ ಯುವಕನನ್ನು ಪತ್ತೆ ಹಚ್ಚಿ ದಿನಾಂಕ ಎ.19 ರಂದು ರೂ 5500.00 ದಂಡ ವಿಧಿಸಲಾಯಿತು.ಬಳಿಕ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಯಿತೆಂದು ತಿಳಿದು ಬಂದಿದೆ.