ಬೆಂಗಳೂರಿನಲ್ಲಿ ಅಪಘಾತ : ಕೊಲ್ಲಮೊಗ್ರದ ಯುವಕ ಮೃತ್ಯು

0

ಬೆಂಗಳೂರುನಲ್ಲಿ ಕಾರು ಬೈಕ್ ಅಪಘಾತದಲ್ಲಿ ಕೊಲ್ಲಮೊಗ್ರದ ಯುವಕ ಮೃತಪಟ್ಟ ಘಟನೆ
ಎ.24 ರಂದು ವರದಿಯಾಗಿದೆ.

ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ಶ್ರೀಮತಿ ವಿಮಲಾಕ್ಷ್ಮಿ ದಂಪತಿಗಳ ಪುತ್ರ ಯತೀಶ್ ಬಾಳೆಬೈಲು ಮೃತ ಪಟ್ಟ ಯುವಕ.
ಇಂದು(ಎ.24) ರಂದು ಬೆಳಿಗ್ಗೆ ಯತೀಶ್ ರವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿರುವುದು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಯತೀಶ್ ರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವವುದಾಗಿ ತಿಳಿದು ಬಂದಿದೆ.

ಅವಿವಾಹಿತರಾಗಿರುವ ಯತೀಶ್ ಅವರು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದು ,ಅವರಿಗೆ ಸುಮಾರು 30 ವರುಷ ವಯಸ್ಸಾಗಿತ್ತು.ಮೃತರು ತಂದೆ ತಾಯಿ , ಸಹೋದರ ಕೀರ್ತಿಷ್,ಸಹೋದರಿ ಶ್ರೀಮತಿ ವೇಣುಕಾ, ಬಂಧು, ಮಿತ್ರರು ಕುಟುಂಬಸ್ಥರನ್ನು ಅಗಲಿದ್ದಾರೆ.